Advertisement

Mizoram; ಪ್ರಧಾನಿ ಮೋದಿ ಜತೆ ವೇದಿಕೆ ಹಂಚಿಕೊಳ್ಳುವುದಿಲ್ಲ: ಮಿಜೋ ಸಿಎಂ ಝೋರಂತಂಗ

12:23 PM Oct 24, 2023 | Team Udayavani |

ಹೊಸದಿಲ್ಲಿ: ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಗೆ ಬಂದಾಗ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಸೋಮವಾರ ಹೇಳಿದ್ದಾರೆ.

Advertisement

ಅಕ್ಟೋಬರ್ 30 ರಂದು ರಾಜ್ಯದ ಪಶ್ಚಿಮ ಭಾಗದಲ್ಲಿರುವ ಮಮಿತ್ ಪಟ್ಟಣಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಸಾಧ್ಯತೆ ಇದೆ.

“ಮಿಜೋರಾಂನ ಜನರೆಲ್ಲರೂ ಕ್ರಿಶ್ಚಿಯನ್ನರು, ಮಣಿಪುರದ ಜನರು (ಮೇಟಿಗಳು) ಮಣಿಪುರದಲ್ಲಿ ನೂರಾರು ಚರ್ಚ್‌ಗಳನ್ನು ಸುಟ್ಟುಹಾಕಿದಾಗ, ಅವರು (ಮಿಜೋಸ್) ಅಂತಹ ಕಲ್ಪನೆಯನ್ನು ಸಂಪೂರ್ಣವಾಗಿ ವಿರೋಧಿಸಿದರು. ಈ ಸಮಯದಲ್ಲಿ ಬಿಜೆಪಿಯೊಂದಿಗೆ ಸಹಾನುಭೂತಿ ಹೊಂದಿದ್ರೆ ಅದು ನನ್ನ ಪಕ್ಷಕ್ಕೆ ದೊಡ್ಡ ಮೈನಸ್ ಆಗಲಿದೆ” ಎಂದು ಝೋರಂತಂಗ ಬಿಬಿಸಿ ನ್ಯೂಸ್ ಸಂದರ್ಶನದಲ್ಲಿ ಹೇಳಿದರು.

‘ಪ್ರಧಾನಿ ಒಬ್ಬರೇ ಬಂದು ವೇದಿಕೆ ಹಂಚಿಕೊಂಡರೆ ಉತ್ತಮ, ನಾನೇ ಪ್ರತ್ಯೇಕವಾಗಿ ವೇದಿಕೆ ಏರುತ್ತೇನೆ’ ಎಂದರು. ಝೋರಂತಂಗಾ ಅವರ ಮಿಜೊ ನ್ಯಾಷನಲ್ ಫ್ರಂಟ್ ಪಕ್ಷವು ಬಿಜೆಪಿ ನೇತೃತ್ವದ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ (NEDA) ಒಂದು ಭಾಗವಾಗಿದೆ ಮತ್ತು ಕೇಂದ್ರದಲ್ಲಿ ಎನ್ ಡಿಎ ಯ ಮಿತ್ರ ಪಕ್ಷವಾಗಿದೆ. ಆದರೆ, ಮಿಜೋರಾಂನಲ್ಲಿ ಬಿಜೆಪಿ ಜತೆ ಪಕ್ಷ ಕೆಲಸ ಮಾಡುವುದಿಲ್ಲ.

ಎಂಎನ್‌ಎಫ್ ಸಂಪೂರ್ಣವಾಗಿ ಕಾಂಗ್ರೆಸ್ ವಿರುದ್ಧವಾಗಿರುವುದರಿಂದ ಎನ್‌ಡಿಎ ಮತ್ತು ಎನ್‌ ಇಡಿಎಗೆ ಸೇರ್ಪಡೆಗೊಂಡಿದೆ. ಕಾಂಗ್ರೆಸ್ ನೇತೃತ್ವದ ಯಾವುದೇ ಮೈತ್ರಿಕೂಟದ ಭಾಗವಾಗಲು ಬಯಸುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ಮಣಿಪುರದ ಜನರಿಗೆ ಆಶ್ರಯ ನೀಡುವ ಕುರಿತು ಝೋರಂತಂಗ ಅವರು ಮಿಜೋರಾಂ ಸರ್ಕಾರವು ಕೇಂದ್ರದ ಹೆಜ್ಜೆಗಳನ್ನು ಅನುಸರಿಸುತ್ತಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next