Advertisement

ವೈದ್ಯರ ಹತ್ಯೆಗೆ ಸುಪಾರಿ ನೀಡಿದ್ದು ಪತ್ನಿ, ಅಳಿಯ!

06:20 AM Mar 17, 2018 | |

ಹುಬ್ಬಳ್ಳಿ: ನಗರದ ಖ್ಯಾತ ಎಲುಬು, ಕೀಲು ತಜ್ಞ ಡಾ| ಬಾಬು ಹುಂಡೇಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿ ಶಶಿಕಲಾ, ಅಳಿಯ ಸೇರಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ವೈದ್ಯರ ಹತ್ಯೆ ತನಿಖೆ ಕೈಗೊಂಡು ಅವರ ಪತ್ನಿ ಶಶಿಕಲಾ ಹಾಗೂ ನವೀನ ಮುಲ್ಕಿಗೌಡರ (ಪತ್ನಿಯ ಕಿರಿಯ ಸಹೋದರ), ಉತ್ತರ ಭಾರತ ಮೂಲದ ರಾಕೇಶ ಯಾದವ, ಧಾರವಾಡದ ನಂದೀಶ ಬೆಟಗೇರಿ ಹಾಗೂ ಹಳೇ ಹುಬ್ಬಳ್ಳಿಯ ಇಸ್ಮಾಯಿಲ್‌ ಖಾನಾಪುರಿಯನ್ನು ಬಂಧಿಸಲಾಗಿದೆ. ಕೊಲೆಗೆ ಹಣಕಾಸು, ಆಸ್ತಿ ವಿವಾದದ ಜತೆಗೆ ಅನೈತಿಕ ಸಂಬಂಧವೂ ಕಾರಣ ಎಂದರು.

ವಿದ್ಯಾನಗರದ ಸುಶ್ರೂತ ನರ್ಸಿಂಗ್‌ ಹೋಂನ ನಿರ್ದೇಶಕ ಹಾಗೂ ಶಿವಶಕ್ತಿ ಆಸ್ಪತ್ರೆಯ ಡಾ.ಬಾಬು ಹುಂಡೇಕರ (48) ಅವರು ನಾಪತ್ತೆಯಾದ ಬಗ್ಗೆ ಅವರ ತಂದೆ ಬಸಪ್ಪ ಅವರು ಸೋಮವಾರ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ವೇಳೆ ವೈದ್ಯರ ಕೊಲೆಯಾದ ಬಗ್ಗೆ ಗೊತ್ತಾಗಿತ್ತು. ಬೆಳಗಾವಿಯ ಸೀರಾಲಾಜಿ ವಿಭಾಗದವರನ್ನು ಕರೆಸಿ ಕೊಠಡಿ ತಪಾಸಣೆ ಮಾಡಿದಾಗ ಕೊಲೆಯಾದ ಕುರುಹು ಸಿಕ್ಕಿತು. ನಂತರ ಖಚಿತ ಮಾಹಿತಿ ಮೇರೆಗೆ ನವೀನ ಮುಲ್ಕಿ ಗೌಡರನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿ
ಸಿದಾಗ ಕೊಲೆ ಮಾಡಿರುವುದು ಪತ್ತೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next