Advertisement

ನೊಂದ ಕುಟುಂಬಗಳಿಗೆ ಸಚಿವರ ನೆರವು

03:51 PM Jul 27, 2022 | Team Udayavani |

ಬೀದರ: ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಸೋಮವಾರ ಔರಾದ ತಾಲೂಕಿನ ಹೋಕ್ರಾಣ ಗ್ರಾಮದಲ್ಲಿ ಸಂಚರಿಸಿ ನೊಂದ ಕುಟುಂಬಗಳಿಗೆ ನೆರವಾದರು.

Advertisement

ಅನಾರೋಗ್ಯದಿಂದಾಗಿ ಮೃತಪಟ್ಟ ಪ್ರಭಾಕರ ಜೋಶಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಗ್ರಾಮದಲ್ಲಿ ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಾಬುರಾವ್‌ ರಾಮರಾವ್‌ ಕಸ್ತೂರೆ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳುವ ಜೊತೆಗೆ ವೈಯಕ್ತಿಕ ಧನಸಹಾಯ ಮಾಡಿದರು. ನಂತರ ಲಘು ಹೃದಯಾಘಾತದಿಂದ ಚಿಕಿತ್ಸೆ ಪಡೆಯುತ್ತಿರುವ ಪಕ್ಷದ ಹಿರಿಯ ಮುಖಂಡ ಭಗವಾನ ಪಾಟೀಲ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದರು.

ರಾಮಶೆಟ್ಟಿ ಪನ್ನಾಳೆ, ಮಹಾದೇವ ಹಚ್ಚಗಾವೆ, ಹಣಮಂತ ನಾಯ್ಕ, ರಾಜು ಶೆಳ್ಕೆ, ಪ್ರಶಾಂತ ರೆಡ್ಡಿ, ಸಂಜು ಮುರ್ಕೆ, ಪ್ರಕಾಶ ಅಲ್ಮಾಜೆ, ಸಚಿನ್‌ ರಾಠೊಡ, ಹಣಮಂತ ಸುರನಾರ, ಖಂಡೋಬಾ ಕಂಗಟೆ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next