Advertisement

ಗೋ‌ಮೂತ್ರದಿಂದ ಸೋಪು- ಶಾಂಪು, ಸಗಣಿಯಿಂದ ಆಯಿಲ್ ಪೇಂಟ್ ತಯಾರಿಗೆ ಕ್ರಮ: ಪ್ರಭು ಚವ್ಹಾಣ್

03:11 PM Dec 31, 2021 | Team Udayavani |

ಬೆಂಗಳೂರು: ಬೇರೆ ಬೇರೆ ಕಡೆ ನಾನು ಭೇಟಿ ಮಾಡಿದ್ದೇವೆ. ಗೋ‌ಮೂತ್ರದಿಂದ ಸೋಪು, ಶಾಂಪು ತಯಾರಿಕೆ, ಸೆಗಣಿಯಿಂದ ಆಯಿಲ್ ಪೇಂಟ್ ಮಾಡುತ್ತಿದ್ದಾರೆ. ಇದರ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ. ನಾವೇ ಇದೆಲ್ಲಾ ತಯಾರಿ ಮಾಡಲು ತೀರ್ಮಾನ ಮಾಡಿದ್ದೇವೆ. ಗೋಬರ್ ಗ್ಯಾಸ್ ಬಗ್ಗೆಯೂ ಚಿಂತಿಸಿದ್ದೇವೆ. ನಮ್ಮ ರೈತರು ಸ್ವಯಂ ಉದ್ಯೋಗ ಮಾಡಬಹುದು ಎಂದು ಪಶುಸಂಗೋಪನ ಸಚಿವ ಪ್ರಭು ಚವ್ಹಾಣ್ ಹೇಳಿದರು.

Advertisement

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ 19 ಜಿಲ್ಲೆಗಳಲ್ಲಿ ಗೋಶಾಲೆ ನಿರ್ಮಾಣಕ್ಕೆ ಪೂರ್ವ ಸಿದ್ಧತೆಗಳು ನಡೆದಿವೆ. ಪ್ರತಿ ಜಿಲ್ಲೆಯಲ್ಲಿ 50,100 ಎಕರೆ ವಿಸ್ತೀರ್ಣದ ಗೋಶಾಲೆ ಮಾಡಲಾಗುತ್ತದೆ. ಒಂದು ಗೋ ಶಾಲೆಗೆ 2 ಕೋಟಿ ರೂ. ಬೇಕು. ಸರ್ಕಾರ ಒಂದು ಗೋಶಾಲೆಗೆ 50 ಲಕ್ಷ ರೂ. ಇಟ್ಟಿದೆ. ಈಗಾಗಲೇ 26 ಲಕ್ಷ ಹಣ ಬಿಡುಗಡೆಯಾಗಿದೆ. ಕೆಲಸ ನೋಡಿ ಉಳಿದ ಹಣ ಬಿಡುಗಡೆ ಮಾಡುತ್ತೇವೆ ಎಂದರು.

ಇದನ್ನೂ ಓದಿ:ಪೊಲೀಸರಿಗೆ ಕೆಲಸ ಕೊಡುವ ರೀತಿ ಮಾಡಬೇಡಿ : ಗೃಹ ಸಚಿವರ ಎಚ್ಚರಿಕೆ

1083 ಹುದ್ದೆಗಳು ನಮ್ಮ‌ಇಲಾಖೆಯಲ್ಲಿ ಖಾಲಿಯಿದೆ. ನಾನು 900 ಹುದ್ದೆಗಳ ಭರ್ತಿಗೆ ಕೇಳಿದ್ದೆ. ಈಗ ಸಿಎಂ 400 ಹುದ್ದೆ ಭರ್ತಿಗೆ ಸಮ್ಮತಿಸಿದ್ದಾರೆ. ಒಟ್ಟು 468 ಹುದ್ದೆಗಳ ಭರ್ತಿಗೆ ನಿರ್ಧರಿಸಿದ್ದೇವೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅನುಮತಿ ಸಿಗಲಿದೆ ಎಂದು ಸಚಿವ ಚವ್ಹಾಣ್ ಹೇಳಿದರು.

ಗೋ ಸಂರಕ್ಷಣೆ ಕಾಯ್ದೆಯ ನಂತರ 10 ಸಾವಿರ ಪ್ರಾಣಿಗಳ ರಕ್ಷಣೆಯಾಗಿದೆ. ರಕ್ಷಣೆ ಮಾಡಿದ ಗೋವುಗಳು ಗೋಶಾಲೆಗೆ ಬಿಟ್ಟಿದ್ದೇವೆ. ಈ ಬಗ್ಗೆ 500 ಕ್ಕಿಂತ ಹೆಚ್ಚು ಕೇಸ್ ದಾಖಲಿಸಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next