Advertisement

ಮಾನವೀಯತೆ ಮೆರೆದ ಸಚಿವ ಯು.ಟಿ.ಖಾದರ್‌

03:45 AM Jun 04, 2017 | Team Udayavani |

ಮೈಸೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳುತ್ತಿದ್ದ ವ್ಯಕ್ತಿಯನ್ನು ತಮ್ಮ ಕಾರಿನಲ್ಲೇ ಮೈಸೂರಿನ ಆಸ್ಪತ್ರೆಗೆ ಕರೆ ತಂದು ದಾಖಲಿಸಿ, ಚಿಕಿತ್ಸೆ ಕೊಡಿಸುವ ಮೂಲಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್‌ ಮಾನವೀಯತೆ ಮೆರೆದಿದ್ದಾರೆ.

Advertisement

ಮೈಸೂರಿನಲ್ಲಿ ಶನಿವಾರ ನಡೆದ “ಕೊಟ್ಟ ಮಾತು-ದಿಟ್ಟ ಸಾಧನೆ’ ಸೌಲಭ್ಯ ವಿತರಣಾ ಸಮಾವೇಶದಲ್ಲಿ ಪಾಲ್ಗೊಂಡ ನಂತರ ಮಂಗಳೂರಿಗೆ ತಮ್ಮ ಕಾರಿನಲ್ಲಿ ಅವರು ತೆರಳುತ್ತಿದ್ದರು. ಮೈಸೂರು ಹೊರವಲಯದ ಹಿನಕಲ್‌ ಬಳಿ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ನರಳುತ್ತಾ ಬಿದ್ದಿರುವುದು ಕಾಣಿಸಿತು. ರಸ್ತೆಯಲ್ಲಿ ಅಡ್ಡ ಬಂದ ದನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಇಮಿ¤ಯಾಝ್ ಎಂಬಾತ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ. ಸ್ಥಳೀಯರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರೂ ಬಂದಿರಲಿಲ್ಲ. ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಖಾದರ್‌, ಕೂಡಲೇ ಕಾರು ನಿಲ್ಲಿಸಿದರು. ತಮ್ಮ ಕಾರಿನಲ್ಲೇ ಗಾಯಾಳುವನ್ನು ಮೈಸೂರಿನ ಐಶ್ವರ್ಯ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದರು. ಸಚಿವರೊಂದಿಗಿದ್ದ ಗೋಪಾಲ ಶೆಟ್ಟಿ ತಲಪಾಡಿ, ಅರುಣ್‌ ಕುಮಾರ್‌ ಕಾಪಿಕಾಡು, ಶ್ರೇಯಸ್‌ ಗೌಡ, ಸಚಿವರ ಆಪ್ತ ಸಹಾಯಕ ಲಿಬ್‌ ಝತ್‌ ಸಚಿವರ ಸೇವೆಗೆ ಕೈಜೋಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next