Advertisement

ವಲಸೆ ಕಾರ್ಮಿಕರ ಗುರುತು ಚೀಟಿ ನೋಂದಣಿ

03:58 PM Apr 10, 2017 | |

ಕುಂದಾಪುರ:  ಜಿಲ್ಲಾಡಳಿತ  ಉಡುಪಿ ಜಿಲ್ಲೆ, ಕಾರ್ಮಿಕ ಇಲಾಖೆ ಉಡುಪಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ  ಉಡುಪಿ, ನಮ್ಮ ಭೂಮಿ ಕನ್ಯಾನ, ಭಂಡಾರ್‌ಕಾರ್ಸ್‌ ಕಾಲೇಜು ಪತ್ರಿಕೋದ್ಯಮ ವಿಭಾಗ  ಜೇಸಿಐ ಕುಂದಾಪುರ ಸಿಟಿ  ಇವರ ಸಹಯೋಗದಲ್ಲಿ ಕಾರ್ಮಿಕರ ಸಮೀಕ್ಷೆ  ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಟ್ಟಡ ವಲಸೆ ಕಾರ್ಮಿಕರ ಗುರುತು ಚೀಟಿ ನೋಂದಣಿ ಕಾರ್ಯಕ್ರಮ ಜರಗಿತು.

Advertisement

ಕುಂದಾಪುರದ ಸಹಾಯಕ ಆಯುಕ್ತ ರಾದ ಶಿಲ್ಪಾ ನಾಗ್‌ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೇ ಕಾರ್ಮಿಕರ ಸಮೀಕ್ಷೆ  ಹಾಗೂ ಗುರುತು ಚೀಟಿ ನೋಂದಣಿ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ಪ್ರೇಮಾನಂದ, ಕುಂದಾಪುರದ ಕ್ರೈಮ್‌ ಇನ್‌ಸ್ಪೆಕ್ಟರ್‌ ದೇವರಾಜ್‌, ಕುಂದಾಪುರದ ಕಾರ್ಮಿಕ ನಿರೀಕ್ಷಕ  ಸತ್ಯನಾರಾಯಣ, ಉಡುಪಿಯ ಕಾರ್ಮಿಕ ನಿರೀಕ್ಷಕರಾದ ಜೀವನ್‌ ಕುಮಾರ್‌ ಹಾಗೂ ರಾಮಮೂರ್ತಿ ನಮ್ಮಭೂಮಿಯ ಚೆನ್ನವೀರಪ್ಪ ವೀರಪ್ಪ ಮೊದಲಾದವರು ಉಪಸ್ಥಿತರಿದ್ದರು.ಸಿಟಿ ಜೇಸಿಯ ಸ್ಥಾಪಕಾಧ್ಯಕ್ಷ ಹುಸೇನ್‌ ಹೈಕಾಡಿ ಸ್ವಾಗತಿಸಿದರು. ಜಿಲ್ಲಾ ಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ  ಪ್ರಬಾಕರ ಆಚಾರ್‌ ಕಾರ್ಯಕ್ರಮ ನಿರೂಪಿಸಿ ದರು.  ಕಾರ್ಮಿಕ ನಿರೀಕ್ಷಕ ಜೀವನ್‌ ಕುಮಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next