Advertisement

ಮೆಹಬೂಬಾ ಮುಫ್ತಿ ಜತೆ ಬಿಜೆಪಿ ಸರಕಾರ ರಚಿಸಿತ್ತಲ್ಲ? : ಸಂಜಯ್ ರಾವುತ್ ಪ್ರಶ್ನೆ

04:13 PM Mar 27, 2022 | Team Udayavani |

ಮುಂಬಯಿ: ಮೆಹಬೂಬಾ ಮುಫ್ತಿ ಬಿಜೆಪಿಯ ಉತ್ತಮ ಸ್ನೇಹಿತರಾಗಿದ್ದು, ಆಕೆ  ಅಫ್ಜಲ್ ಗುರು ಮತ್ತು ಬುರ್ಹಾನ್ ವಾನಿಯನ್ನು ಬೆಂಬಲಿಸಿದ ಹೊರತಾಗಿಯೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಅವರೊಂದಿಗೆ ಸರ್ಕಾರವನ್ನು ರಚಿಸಿದ್ದೇಕೆ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಪ್ರಶ್ನಿಸಿದ್ದಾರೆ.

Advertisement

ಪ್ರಧಾನಿ ಮೋದಿ ಮತ್ತು ಕಾಶ್ಮೀರ ಫೈಲ್ಸ್ ಚಿತ್ರದ ವಿರುದ್ಧ ವಾಗ್ದಾಳಿ ನಡೆಸಿದ ರಾವುತ್, ಮುಫ್ತಿ ಅವರು ಕಾಶ್ಮೀರ ಸಮಸ್ಯೆ ಬಗೆಹರಿಸಲು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು ಎಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಈ ಪಾಪ ಬಿಜೆಪಿಯವರದ್ದು. ಹಾಗಾಗಿ ಅದಕ್ಕೆ ಅವರೇ ಜವಾಬ್ದಾರರು. ಬಿಜೆಪಿ ಮೊದಲಿನಿಂದಲೂ ಮೆಹಬೂಬಾ ಮುಫ್ತಿ ಜತೆ ವಿಶೇಷ ದೋಸ್ತಿ ಹೊಂದಿದೆ. ಮುಫ್ತಿ ಅವರ ಪಕ್ಷ ಪ್ರತ್ಯೇಕತಾವಾದಿಗಳಿಗೆ ಸಹಾಯ ಮಾಡುತ್ತಿದೆ ಎಂದು ತಿಳಿದಿದ್ದರೂ, ಅವರ ಜೊತೆ ಬಿಜೆಪಿ ಅಧಿಕಾರಕ್ಕೆ ಬಂದಿತು. ಅದರಿಂದಲೇ ಮುಫ್ತಿ ಪಕ್ಷಕ್ಕೆ ಬಲ ಬಂದಿದ್ದು ಎಂದು ಕಿಡಿ ಕಾರಿದರು.

ಇಂದು ಮುಫ್ತಿ ಏನೇ ಹೇಳುತ್ತಿದ್ದರೂ ಅದಕ್ಕೆ ಬಿಜೆಪಿಯೇ ಹೊಣೆ. ನಮ್ಮ ಪಕ್ಷ ಇದನ್ನು ವಿರೋಧಿಸುತ್ತಲೇ ಇರುತ್ತದೆ. ಕಾಶ್ಮೀರವನ್ನು ಪಾಕಿಸ್ಥಾನಕ್ಕೆ ಸೇರಿಸುವ ಉಗ್ರರ ಬಗ್ಗೆ ಸಹಾನುಭೂತಿ ಹೊಂದಿರುವ ಮುಫ್ತಿ  ಪಕ್ಷವನ್ನು ಬಲಪಡಿಸಲು ಬಿಜೆಪಿ ಶ್ರಮಿಸುತ್ತಿದೆ ಎಂದು ಸಂಜಯ್ ರಾವುತ್ ಗಂಭೀರ ಆರೋಪ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next