Advertisement

ಸಿಎಂ, ಕೃಷಿ ಸಚಿವರ ಜತೆ ಕರಾವಳಿ ರೈತ ನಿಯೋಗದ ಶೀಘ್ರ ಸಭೆ : ಸುನಿಲ್‌

01:13 AM Nov 09, 2021 | Team Udayavani |

ಕೋಟ: ಕರಾವಳಿಯ ರೈತರು ಭತ್ತದ ಬೆಳೆಗೆ ಸಂಬಂಧಪಟ್ಟಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

Advertisement

ಈ ಬಗ್ಗೆ ರೈತರು ಬ್ರಹ್ಮಾವರದಲ್ಲಿ ನಡೆಸಿದ ಪ್ರತಿಭಟನೆ ಕುರಿತು ಮಾಹಿತಿ ಇದೆ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಜನಪರ ರೈತ ವೇದಿಕೆ ವತಿ ಯಿಂದ ನೀಡಿದ ಮನವಿ ಕೂಡ ಕೈ ಸೇರಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ರೈತ ಮುಖಂಡರನ್ನೊಳಗೊಂಡ ನಿಯೋಗದೊಂ ದಿಗೆ ಮುಖ್ಯ ಮಂತ್ರಿಗಳು, ಕೃಷಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಇಂಧನ ಸಚಿವ ಸುನಿಲ್‌ ಕುಮಾರ್‌ ಸೋಮವಾರ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ರೈತರ ಬೇಡಿಕೆಗಳು ಸಮಂಜಸವಾಗಿದ್ದು ಮುಖ್ಯಮಂತ್ರಿಗಳು, ಕೃಷಿ ಸಚಿವರೊಂದಿಗೆ ಚರ್ಚಿಸಿದರೆ ಸಾಕಷ್ಟು ಬಗೆಹರಿಯಲಿದೆ. ಇದಕ್ಕಾಗಿ ಶೀಘ್ರ ಸಮಯ ನಿಗದಿಪಡಿಸುವು ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಹಣಕಾಸಿನ ಒಳಗೊಳ್ಳುವಿಕೆ : ಚೀನಾವನ್ನೇ ಹಿಂದಿಕ್ಕಿದ ಭಾರತ

ಯಕ್ಷಗಾನ ಅಕಾಡೆಮಿಗೂ ಶೀಘ್ರ ನೇಮಕ
ರಾಜ್ಯ ಯಕ್ಷಗಾನ ಅಕಾಡೆಮಿ ಹಾಗೂ ಬಯಲಾಟ ಅಕಾಡೆಮಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿರುವ ಕುರಿತು ಪ್ರಶ್ನಿಸಿದಾಗ, ಈ ಕುರಿತು ಪೂರಕ ಪ್ರಕ್ರಿಯೆಗಳು ನಡೆಯುತ್ತಿದ್ದು ಶೀಘ್ರವಾಗಿ ನೇಮಕಾತಿ ನಡೆಯಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next