Advertisement

ಮೀರಾರೋಡ್‌: ಸಾಯಿಸಿದ್ಧಿ ಜ್ಯುವೆಲ್ಸ್‌ನ ನೂತನ ಮಳಿಗೆ ಆರಂಭ

11:51 AM Sep 28, 2017 | |

ಮುಂಬಯಿ: ಮುಂಬಯಿ ಮಹಾನಗರದ ಪ್ರಖ್ಯಾತ ವಜ್ರಾಭರಣಗಳ ಸಂಸ್ಥೆ ಸಾಯಿಸಿದ್ಧಿ ಜ್ಯುವೆಲ್ಸ್‌ ಇದರ ವಜ್ರಾಭರಣಗಳ ನೂತನ ಶೋ ರೂಮ್‌ ಮೀರಾರೋಡ್‌ ಪೂರ್ವದ ಜಾಂಗಿಡ್‌ ಸರ್ಕಲ್‌, ಜಾಂಗಿಡ್‌ ಕಾಂಪ್ಲೆಕ್ಸ್‌ನ ಎದುರಿನಲ್ಲಿರುವ ಆಕಾಶ್‌ ಗಂಗಾ ಬಿಲ್ಡಿಂಗ್‌ನ ಶಾಪ್‌ ನಂಬರ್‌ 16 ರಲ್ಲಿ ಸೆ. 21 ರಂದು ಲೋಕಾರ್ಪಣೆಗೊಂಡಿತು.

Advertisement

ಮೀರಾ ಭಾಯಂದರ್‌ ಪಾಲಿಕೆ ಮೇಯರ್‌ ಡಿಂಪಲ್‌ ಮೆಹ್ತಾ ಅವರು  ನೂತನ ಮಳಿಗೆಯನ್ನು ಲೋಕಾರ್ಪಣೆಗೊಳಿಸಿದರು.  ಸ್ಥಳೀಯ ನಗರ ಸೇವಕ ತುಳು-ಕನ್ನಡಿಗ ಅರವಿಂದ್‌ ಎ. ಶೆಟ್ಟಿ, ಸಾಯಿಸಿದ್ಧಿ ಜ್ಯುವೆಲ್ಸ್‌ನ ಮಾಲಕರಾದ ಕಾರ್ತಿಕ್‌ ಸಿಕªರ್‌, ರಿಂಕು ಕಾರ್ತಿಕ್‌ ಸಿಕªರ್‌ ಮತ್ತು ಅವರ ಪರಿವಾರ, ಉದ್ಯಮಿ ಪ್ರವೀಣ್‌ ಪಟೇಲ್‌  ಉಪಸ್ಥಿತರಿದ್ದರು.

ಸಾಯಿಸಿದ್ದಿ ಜುವೆಲ್ಲರ್ ನ ಈ ನೂತನ ಮಳಿಗೆಯಲ್ಲಿ ವಜ್ರಾಭರಣದ ಮಂಗಳಸೂತ್ರ, ನೆಕ್ಲೆಸ್‌, ಪೆಂಡೆಂಟ್‌, ವಿ. ಸೇಪ್‌ ರಿಂಗ್‌, ಬ್ರಾಸ್‌ಲೈಟ್‌, ಕಿವಿಯೋಲೆ, ಬಳೆಗಳು, ಡೈಮಂಡ್‌ ವಾಚ್‌, ಡೈಮಂಡ್‌ ಪೆನ್‌, ಡೈಮಂಡ್‌ ಕನ್ನಡಕ ಇನ್ನಿತರ ವೈವಿಧ್ಯಮಯ ಚಿನ್ನ-ವಜ್ರಾಭರಣಗಳು ಲಭ್ಯವಿದೆ. ಕಳೆದ ಹಲವಾರು ವರ್ಷಗಳಿಂದ ವಜ್ರಾಭರಣ ಕ್ಷೇತ್ರದಲ್ಲಿ ವಿಶೇಷ ಅನುಭವವನ್ನು ಹೊಂದಿರುವ ಸಾಯಿಸಿದ್ಧಿ ಜ್ಯುವೆಲ್ಲರ್ ತುಳು-ಕನ್ನಡಿಗರ ಅಚ್ಚು ಮೆಚ್ಚಿನ ಮಳಿಗೆಯೂ ಆಗಿದೆ. 

ಚಿತ್ರ-ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next