Advertisement

ನೀರಿನ ವಿಚಾರಕ್ಕೆ ಗ್ರಾಮಗಳ ಕಿತ್ತಾಟ

06:00 PM May 03, 2020 | Suhan S |

ಕೋಲಾರ: ತಾಲೂಕಿನ ತೊಟ್ಲಿ ಗ್ರಾಪಂ ವ್ಯಾಪ್ತಿಯ ಶೆಟ್ಟಿಕುಂಟೆ ಮತ್ತು ಕೆಂಬತ್ತನಹಳ್ಳಿ ಗ್ರಾಮಗಳ ಗ್ರಾಮಸ್ಥರ ನಡುವೆಯೇ ನೀರಿಗಾಗಿ ಕಿತ್ತಾಟ ನಡೆದಿದ್ದು, ಕೊನೆಗೆ ಗ್ರಾಮಾಂತರ ಠಾಣೆ ಪೊಲೀಸರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದಾರೆ.

Advertisement

ಕಳೆದ 2 ವರ್ಷಗಳಿಂದಲೂ ಶೆಟ್ಟಿಕುಂಟೆ ಗ್ರಾಮದ ಬೋರ್‌ವೆಲ್‌ನಿಂದ ಕೆಂಬತ್ತನಹಳ್ಳಿ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದ್ದು, ಇದೀಗ ಶೆಟ್ಟಿಕುಂಟೆ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ನೀರು ನೀಡುವಂತೆ ಕೆಂಬತ್ತನಹಳ್ಳಿಯವರನ್ನು ಕೇಳಲಾಗಿ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಎರಡೂ ಗ್ರಾಮಗಳ ಗ್ರಾಮಸ್ಥರ ನಡುವೆ ಮಾತಿನ ಚಕಮಕಿಗಳು ಆರಂಭವಾಗಿವೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಕಿರಣ್‌ ಮತ್ತು ಸಿಬ್ಬಂದಿ ಭೇಟಿ ನೀಡಿ ಗುಂಪು ಚದುರಿಸಿ, ಎರಡೂ ಗ್ರಾಮಗಳ ಮುಖಂಡರನ್ನು ಸೇರಿಸಿ, ಬೋರ್‌ವೆಲ್‌ಅನ್ನು ತಲಾ ಒಂದೊಂದು ದಿನದಂತೆ 15 ದಿನಗಳು ಬಳಸಿಕೊಳ್ಳಿ, ಆ ವೇಳೆಗೆ ಗ್ರಾಪಂನಿಂದ ಹೊಸ ಬೋರ್‌ವೆಲ್‌ ಕೊರೆಯಿಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next