Advertisement

ಬಸ್ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಅನಾಥ ಬ್ಯಾಗ್ ಗಳು: ತೆರೆದಾಗ ಇದ್ದಿದ್ದು ಬೇರೆಯೇ

09:20 AM Jan 23, 2020 | keerthan |

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದಲ್ಲಿ ಬುಧವಾರ ಕಂಡು ಬಂದ ನಾಲ್ಕು ಅಪರಿಚಿತ ಬ್ಯಾಗ್ ಗಳು ಪ್ರಯಾಣಿಕರನ್ನು ಕೆಲಕಾಲ ಆಂತಕಕ್ಕೀಡು ಮಾಡಿದ ಘಟನೆ ನಡೆಯಿತು.

Advertisement

ಬೀದಿ ಬದಿ ವ್ಯಾಪಾರಸ್ಥರು ನಗರದ ಬಸ್ ನಿಲ್ದಾಣದಲ್ಲಿ ನಾಲ್ಕು ಬ್ಯಾಗ್ ಗಳು ಇಟ್ಟು ಹೊರಗೆ  ಹೋಗಿದ್ದು ಅವುಗಳನ್ನು ನೋಡಿದ ಪ್ರಯಾಣಿಕರು  ಅನುಮಾನಗೊಂಡು ಕೆಲಕಾಲ ಆತಂಕಗೊಂಡಿದ್ದಾರೆ.

ತಕ್ಷಣ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಚಿಕ್ಕಬಳ್ಳಾಪುರ ‌ವೃತ್ತ ನಿರೀಕ್ಷಕ ಸುದರ್ಶನ್ ಹಾಗೂ  ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲಿಸಿದಾಗ ಬ್ಯಾಗ್ ಗಳಲ್ಲಿ ಗುಟ್ಕಾ ಪ್ಯಾಕೆಟ್ ಗಳು ಕಂಡು ಬಂದಿವೆ.

ಬಳಿಕ ಪ್ರಯಾಣಿಕರು ಹಾಗೂ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next