Advertisement

ಮಾರ್ಪಳ್ಳಿಡ್‌ “ಕಂಡೊಡೊಂಜಿ ದಿನ’

03:10 AM Jul 10, 2017 | |

ಉಡುಪಿ: ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ಭಜನ ಮಂಡಳಿ ಆಶ್ರಯದಲ್ಲಿ “ಕಂಡೊಡೊಂಜಿ ದಿನ’ವನ್ನು ಮಾರ್ಪಳ್ಳಿ ಗರೋಡಿ ಸಮೀಪದ ಗದ್ದೆಯಲ್ಲಿ  ಜು. 9ರಂದು ಆಚರಿಸಲಾಯಿತು. ವಾಲಿಬಾಲ್‌, ತ್ರೋಬಾಲ್‌, ಹಗ್ಗಜಗ್ಗಾಟ, ಹಿಮ್ಮುಖ ಓಟ ಇತ್ಯಾದಿ ಬಗೆಬಗೆಯ ಆಟಗಳನ್ನು ಆಡಿ ಊರಿನವರು ಸಂತೋಷಪಟ್ಟರು. 

Advertisement

ಹಿರಿಯ ಕೃಷಿಕ ಕೃಷ್ಣ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊರಂಗ್ರಪಾಡಿ ಸಿ.ಎ. ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಶೇಖರ ಸುವರ್ಣ, ಕಂಬಳದ ಮನೆ ಗುರಿಕಾರ ನವೀನಚಂದ್ರ ಶೆಟ್ಟಿ, ಬಡಗಬೆಟ್ಟು ಕ್ರೆಡಿಟ್‌ ಕೋ 
ಆಪರೇಟಿವ್‌ ಸೊಸೈಟಿ ಪ್ರಬಂಧಕ ಶಂಕರ ದೇವಾಡಿಗ, ನಂದಗೋಕುಲ ಯುವ ಮಂಡಲದ ಅಧ್ಯಕ್ಷ ಹರೀಶ ಎಂ., ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಅಧ್ಯಕ್ಷ ಯು.ಸದಾಶಿವ ಶೆಟ್ಟಿ, ಮಹಾಲಿಂಗೇಶ್ವರ ಚಂಡೆ ಬಳಗದ ಅಧ್ಯಕ್ಷ ಪಿ.ವೇದವ್ಯಾಸ ತಂತ್ರಿ, ಗೆಳೆಯರ ಬಳಗದ ಉಪಾಧ್ಯಕ್ಷ ವಿಶ್ವಜಿತ್‌ ಸಾಲ್ಯಾನ್‌, ನಿವೃತ್ತ ಶಿಕ್ಷಕ ಕಿಟ್ಟ ಮಾಸ್ತರ್‌, ಅಲೆವೂರು ಗ್ರಾ.ಪಂ. ಸದಸ್ಯರಾದ ಸುಧಾಕರ ಪೂಜಾರಿ, ಪುಷ್ಪಲತಾ, ಶಾಂತಾ ನಾಯ್ಕ, ಸುಲೋಚನಾ ನಾಯ್ಕ, ನಂದಗೋಕುಲ ಮಹಿಳಾ ಮಂಡಳಿ ಅಧ್ಯಕ್ಷೆ ರಾಜಶ್ರೀ ಐತಪ್ಪ ಅಮೀನ್‌, ಮಹಿಳಾ ಮಂಡಳಿ ಅಧ್ಯಕ್ಷೆ ಪ್ರಮೀಳಾ ಸುರೇಶ್‌ ಅವರು ಅತಿಥಿಗಳಾಗಿ ಆಗಮಿಸಿದ್ದರು. 

ಮಹಾಲಿಂಗೇಶ್ವರ ಭಜನ ಮಂಡಳಿ ಅಧ್ಯಕ್ಷ ಗಣೇಶ ದೇವಾಡಿಗ ಸ್ವಾಗತಿಸಿ, ವಿಜಯ ಆರ್‌. ನಾಯಕ್‌ ಕಾರ್ಯಕ್ರಮ ನಿರ್ವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next