Advertisement

ಕೋವಿಡ್ ಸಂಕಷ್ಟ : ಒಂದು ಲಕ್ಷ ರೂ ದೇಣಿಗೆ ನೀಡಿದ ಶಾಸ್ತ್ರಿ ಬೆಡಗಿ ಮಾನ್ಯ

02:55 PM May 13, 2021 | Team Udayavani |

ಕೋವಿಡ್ ಕಷ್ಟದಲ್ಲಿರುವವರಿಗೆ ಅನೇಕ ಸಿನಿ ತಾರೆಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಲಾಕ್‌ ಡೌನ್‌ ನಿಂದ ಸಂಕಷ್ಟದಲ್ಲಿರುವ ಚಿತ್ರರಂಗದ ಕಾರ್ಮಿಕರು, ಕಲಾವಿದ, ತಂತ್ರಜ್ಞರಿಗೆ ನಟ-ನಿರ್ದೇಶಕ ಉಪೇಂದ್ರ ಸಹಾಯ ಹಸ್ತ ಚಾಚಿದ್ದಾರೆ.

Advertisement

ಉಪೇಂದ್ರ ಅವರ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಉಪ್ಪಿ ಜೊತೆ ಮತ್ತಷ್ಟು ಸಿನಿಮಾ ತಾರೆಯರು ಕೈ ಜೋಡಿಸಿದ್ದಾರೆ. ಶಾಸ್ತ್ರಿ ಸಿನಿಮಾದ ನಟ ಮಾನ್ಯಾ ಕೂಡ ಕೋವಿಡ್ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಉಪೇಂದ್ರಗೆ ಹಿರಿಯ ನಟಿ ಸರೋಜದೇವಿ, ನಟ ಸಾಧು ಕೋಕಿಲಾ, ಶೋಭರಾಜ್, ಪವನ್ ಒಡೆಯರ್ ಸೇರಿದಂತೆ ಅನೇಕರು ಕೈಜೋಡಿಸಿದ್ದು, ತಮಗಾದ ಸಹಾಯವನ್ನು ಮಾಡಿದ್ದಾರೆ.

ದರ್ಶನ್ ನಟನೆಯ ಶಾಸ್ತ್ರಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಮಾನ್ಯಾ ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ದೂರದಲ್ಲಿದ್ದರೂ ಕನ್ನಡಿಗರ ನೆರವಿಗೆ ಧಾವಿಸಿರುವ ಇವರು ಕೋವಿಡ್ ಸಂಕಷ್ಟದಲ್ಲಿರುವವರಿಗೆ 1 ಲಕ್ಷ ರೂ. ನೆರವು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next