Advertisement

ಅತಿಥಿ ಉಪನ್ಯಾಸಕರಿಗೆ ಆಹಾರದ ಕಿಟ್ ವಿತರಿಸಿದ ಸಹಕಾರಿ ಧುರೀಣ ಮಂಜುನಾಥ ಬೆಳಗೋಡು

11:57 AM May 23, 2020 | keerthan |

ಗಂಗಾವತಿ: ಕೋವಿಡ್-19 ಸಂದರ್ಭದಲ್ಲಿ ಗಂಗಾವತಿ ನಗರದ ಶ್ರೀ ರಾಮುಲು ಮಹಾವಿದ್ಯಾಲಯ ಸೇರಿ ವಿವಿಧ ಪದವಿ‌ ಮಹಾವಿದ್ಯಾಲಯಗಳಲ್ಲಿ‌ ಕೆಲಸ ಮಾಡುವ ಅತಿಥಿ ಉಪನ್ಯಾಸಕರಿಗೆ ಒಂದು ತಿಂಗಳಿಗಾಗುವಷ್ಟು ಆಹಾರದ ಕಿಟ್ ವಿತರಣೆ ಮಾಡುವ ಮೂಲಕ ಹೊಸಪೇಟೆ ಸಹಕಾರಿ ಧುರೀಣ ಮಂಜುನಾಥ ಬೆಳಗೋಡು ಅವರು ಮಾನವೀಯತೆ ಮೆರೆದಿದ್ದಾರೆ.

Advertisement

ಸುಮಾರು 100 ಜನ ಅತಿಥಿ ಉಪನ್ಯಾಸಕರು ವೇತನವಿಲ್ಲದೆ ಕುಟುಂಬ ನಿರ್ವಾಹಣೆಗೆ ತೊಂದರೆಯಾಗಿರುವ ಕುರಿತು ಗೆಳೆಯ ಮತ್ತು ಅತಿಥಿ ಉಪನ್ಯಾಸಕರಾಗಿರುವ ರಮೇಶ ಪೂಜಾರ್, ಸತೀಶ ಕೊಂತಂ ಮಾಹಿತಿ ಪಡೆದು ಶನಿವಾರ ಶ್ರೀ ರಾಮುಲು ಮಹಾವಿದ್ಯಾಲಯದಲ್ಲಿ ಸರಳ ಕಾರ್ಯಕ್ರಮದ ಮೂಲಕ ಆಹಾರದ ಕಿಟ್ ವಿತರಿಸಿದರು.

ಆಹಾರದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ‌ ದಾನಿ ಮಂಜುನಾಥ ಬೆಳಗೋಡು, ಆಡಳಿತಾಧಿಕಾರಿ ಪ್ರೋ.ಎಫ್.ಎಚ್.ಚಿತ್ರಗಾರ, ಪ್ರಾಚಾರ್ಯರಾದ ಲಲಿತಾ ಭಾವಿಕಟ್ಟಿ,‌ ಸೇರಿ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next