ಮಣಿಪುರಕ್ಕೆ ರಣಜಿ ಮಾನ್ಯತೆ ಲಭಿಸಿದ್ದರಿಂದ 18 ವರ್ಷದ ರಾಜ್ ಕುಮಾರ್ಗೂ ದೇಶಿ ಕ್ರಿಕೆಟಿನ ಬಾಗಿಲು ತೆರೆದಿತ್ತು. ಸದ್ಯ ಕೂಚ್ ಬೆಹಾರ್ನಲ್ಲಿ ಆಡುತ್ತಿರುವ ಅವರು ತಮ್ಮ ಘಾತಕ ಬೌಲಿಂಗ್ನಿಂದ ಮಣಿಪುರಕ್ಕೆ 10 ವಿಕೆಟ್ಗಳ ಜಯ ತಂದಿತ್ತರು.
Advertisement
ಮೊದಲು ಬ್ಯಾಟಿಂಗ್ ಮಾಡಿದ ಅರುಣಾಚಲ ಪ್ರದೇಶ 138ಕ್ಕೆ ಆಲೌಟಾಯಿತು. ಮಣಿಪುರ 122 ರನ್ನಿಗೆ ಉರುಳಿತು. 2ನೇ ಇನ್ನಿಂಗ್ಸ್ನಲ್ಲಿ ಅರುಣಾಚಲಪ್ರದೇಶ, ರಾಜ್ಕುಮಾರ್ ದಾಳಿಗೆ ಸಿಲುಕಿ 18.5 ಓವರ್ಗಳಲ್ಲಿ ಕೇವಲ 36 ರನ್ನಿಗೆ ಆಲೌಟಾಯಿತು. ರಾಜ್ಕುಮಾರ್ ಸಾಧನೆ 11 ರನ್ನಿಗೆ 10 ವಿಕೆಟ್! ಈ ಹಂತದಲ್ಲಿ ಅವರು 3 ಬಾರಿ ಹ್ಯಾಟ್ರಿಕ್ ಹಾದಿಯಲ್ಲಿದ್ದರು. ಗೆಲುವಿಗೆ 53 ರನ್ ಗುರಿ ಪಡೆದ ಮಣಿಪುರ 7.5 ಓವರ್ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿತು. ಮೊದಲ ಇನ್ನಿಂಗ್ಸ್ನಲ್ಲಿ ರಾಜ್ಕುಮಾರ್ 33 ರನ್ನಿಗೆ 5 ವಿಕೆಟ್ ಉರುಳಿಸಿದ್ದರು.