Advertisement

Manipal: ಈಶ್ವರ ನಗರದಲ್ಲಿ ಚಿರತೆ?

07:55 AM Aug 03, 2024 | Team Udayavani |

ಮಣಿಪಾಲ: ವಾರದಿಂದ ಮಣಿಪಾಲ ಪರಿಸರದಲ್ಲಿ ಭಯ ಹುಟ್ಟಿಸಿದ ಚಿರತೆ ಈಗ ಈಶ್ವರ ನಗರ ಭಾಗದಲ್ಲಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.ಆದರೆ ಈ ಬಗ್ಗೆ ಅರಣ್ಯ ಇಲಾಖೆಗೆ ಯಾವುದೇ ಅಧಿಕೃತ ದೂರುಗಳು ಬಂದಿಲ್ಲ.

Advertisement

ಪೆರಂಪಳ್ಳಿ, ಅನಂತನಗರ ಭಾಗದಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಸಿಸಿಟಿವಿ ಮತ್ತು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದರು. ಮಣಿಪಾಲದಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಚಿರತೆ ಓಡಾಡುತ್ತಿದೆಯೋ ಅಥವಾ ಎರಡು ಮೂರು ಚಿರತೆಗಳಿವೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಹೆಚ್ಚಾಗಿದೆ.

ಆದರೆ ಈ ಬಗ್ಗೆ ಯಾರೂ ಅರಣ್ಯ ಇಲಾಖೆಗೆ ಅಧಿಕೃತವಾಗಿ ದೂರು ನೀಡಿಲ್ಲ. ಅಲ್ಲದೆ ಅರಣ್ಯ ಇಲಾಖೆಯವರು ಮಣಿಪಾಲ ಭಾಗದಲ್ಲಿ ಗಸ್ತು ಬಿಗಿಗೊಳಿಸಿದ್ದು, ಚಿರತೆ ಹಿಡಿಯುವ ನಿಟ್ಟಿನಲ್ಲಿ ಅಲ್ಲಲ್ಲಿ ಗೂಡುಗಳನ್ನು ಇರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next