Advertisement

Mangaluru ಕಳವು ಶಂಕೆ: ಯುವಕನಿಗೆ ಚೂರಿ ಇರಿತ

11:59 PM May 20, 2024 | Team Udayavani |

ಮಂಗಳೂರು: ಮೊಬೈಲ್‌ ಮತ್ತು ಹಣ ಕದ್ದಿರುವ ಶಂಕೆಯಲ್ಲಿ ಯುವಕನೋರ್ವ ಇನ್ನೋರ್ವ ಯುವಕನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದೆ.

Advertisement

ಬಂಟ್ವಾಳ ಪುಣಚದ ಸಚಿನ್‌ (31) ಗಾಯಗೊಂಡವರು. ಕೇರಳ ಕೊಲ್ಲಂನ ನೌಫಾಲ್‌ ಆರೋಪಿ. ನೌಫಾಲ್‌ ಮತ್ತು ಆತನ ಗೆಳಯ ಅನಾಸ್‌ ಕೇರಳದಿಂದ ಮಂಗಳೂರಿಗೆ ಬಂದಿದ್ದರು.

ಅಲ್ಲಿ ಸಚಿನ್‌ ಜತೆ ಸೇರಿ ಊಟ ಮಾಡಿ ರೈಲು ನಿಲ್ದಾಣದ ಬಳಿ ಮಲಗಿದ್ದರು. ಸೋಮವಾರ ಬೆಳಗ್ಗೆ ನೌಫಾಲ್‌ ಆತನ ಮೊಬೈಲ್‌ ಮತ್ತು ಒಂದು ಸಾವಿರ ನಗದನ್ನು ಸಚಿನ್‌ ಕದ್ದಿದ್ದಾನೆ ಎಂದು ಆರೋಪಿಸಿದ್ದ. ಇದರಿಂದಾಗಿ ಇಬ್ಬರ ನಡುವೆ ವಾಗ್ವಾದ ಉಂಟಾಯಿತು.

ಈ ವೇಳೆ ನೌಫಾಲ್‌ ಚೂರಿಯಿಂದ ಸಚಿನ್‌ಗೆ ಹೊಟ್ಟೆಗೆ ಇರಿದಿದ್ದಾನೆ. ಸಚಿನ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ನೌಫಾಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next