Advertisement

Mangaluru ನೀರುಮಾರ್ಗ: ಕಾಡುಕೋಣ ಪತ್ತೆ

12:18 AM Dec 06, 2023 | Team Udayavani |

ಮಂಗಳೂರು: ನಗರದ ಹೊರವಲಯದ ನೀರುಮಾರ್ಗ ರಂಗಪಾದೆ ಬಳಿ ಸೋಮವಾರ ತಡರಾತ್ರಿ ಕಾಡಕೋಣವೊಂದು ಪತ್ತೆಯಾಗಿದೆೆ. ರಾತ್ರಿ 12.30ರ ವೇಳೆಗೆ ರಂಗಪಾದೆ ಕ್ರಾಸ್‌ ಬಳಿ ನಡುರಸ್ತೆಯಲ್ಲೇ ಕಾಡುಕೋಣ ನಿಂತಿತ್ತು. ಬಳಿಕ ಗುಡ್ಡವನ್ನೇರಿ ಓಡಿಹೋಗಿರುವುದಾಗಿ ತಿಳಿದು ಬಂದಿದೆ.

Advertisement

ಶನಿವಾರ ರಾತ್ರಿ ಮಂಗಳೂರಿನ ಕದ್ರಿ ಕೈಬಟ್ಟಾಲ್‌, ಕದ್ರಿ ಜೋಗಿ ಮಠದಲ್ಲೂ ಕಾಡುಕೋಣ ಪತ್ತೆಯಾಗಿತ್ತು.

ನೀರುಮಾರ್ಗದಲ್ಲಿ ಪತ್ತೆಯಾಗಿರುವುದು ಇದೇ ಕಾಡುಕೋಣವೇ? ಎಂಬುದು ಸ್ಪಷ್ಟವಾಗಿಲ್ಲ.
ಕೆಲವು ದಿನಗಳ ಹಿಂದೆಯೂ ನೀರುಮಾರ್ಗ ವ್ಯಾಪ್ತಿಯಲ್ಲಿ ಕಾಡುಕೋಣ ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next