Advertisement

Mangaluru: ಆ್ಯಂಬುಲೆನ್ಸ್‌ ಪಲ್ಟಿ; ರೋಗಿ ಸಾವು

08:59 PM Sep 25, 2024 | Team Udayavani |

ಮಂಗಳೂರು: ಆ್ಯಂಬುಲೆನ್ಸ್‌ ಪಲ್ಟಿಯಾಗಿ ಅದರಲ್ಲಿದ್ದ ರೋಗಿಯೋರ್ವರು ಮೃತಪಟ್ಟ ಘಟನೆ ಬುಧವಾರ ಮುಂಜಾವ ನಗರದ ಕಣ್ಣೂರಿನ ಬಳಿ ಸಂಭವಿಸಿದೆ.

Advertisement

ಕಡಬ ತಾಲೂಕು ಹಳೆನೇರಂಕಿ ಗ್ರಾಮದ ದಾಸಪ್ಪ ರೈ (65) ಮೃತಪಟ್ಟವರು. ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಅನಂತರ ಮಂಗಳೂರಿನ ಆಸ್ಪತ್ರೆಗೆಂದು ಕರೆದುಕೊಂಡು ಬರುತ್ತಿದ್ದಾಗ ಕಣ್ಣೂರು ಮಸೀದಿ ಬಳಿ ಮುಂಜಾವ 3.30ರ ಸುಮಾರಿಗೆ ಆ್ಯಂಬುಲೆನ್ಸ್‌ ಪಲ್ಟಿಯಾಗಿದೆ. ಪರಿಣಾಮವಾಗಿ ದಾಸಪ್ಪ ಅವರು ಮೃತಪಟ್ಟಿದ್ದು, ಅವರ ಜತೆಗಿದ್ದ ಅವರ ಪತ್ನಿ, ಪುತ್ರ ಹಾಗೂ ಸಂಬಂಧಿ ಯುವಕ ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next