Advertisement

Mangaluru; ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ವ್ಯಕ್ತಿ ಸಾವು

11:48 PM Jan 26, 2024 | Team Udayavani |

ಮಂಗಳೂರು: ವಯೋವೃದ್ಧರೋರ್ವರು ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಸ್ವಲ್ಪ ಸಮಯದ ಅನಂತರ ಕುಸಿದು ಬಿದ್ದು ಮೃತಪಟ್ಟ ಘಟನೆ ನಗರದ ಬಿಜೈ ನ್ಯೂ ರೋಡ್‌ನ‌ಲ್ಲಿ ಸಂಭವಿಸಿದೆ.

Advertisement

ಅಬ್ದುಲ್‌ ಸಮದ್‌ (80) ಮೃತಪಟ್ಟವರು. ಶುಕ್ರವಾರ ಬೆಳಗ್ಗೆ 7 ಗಂಟೆಗೆ ಬಿಜೈ ನ್ಯೂ ರೋಡ್‌ನ‌ಲ್ಲಿರುವ ಫೆಲಿಸಿಟಿ ಅಪಾರ್ಟ್‌ಮೆಂಟ್‌ ಅಸೋಸಿಯೇಶನ್‌ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಸರಕಾರಿ ಅಧಿಕಾರಿ ಅಬ್ದುಲ್‌ ಸಮದ್‌ ಅವರು ಧ್ವಜಾರೋಹಣ ನೆರವೇರಿಸಿದ್ದರು. ಆಬಳಿಕ ಮನೆಯ ಒಳಗೆ ಬಂದು ಕುಳಿತಾಗ ಕುಸಿದು ಬಿದ್ದರು.

ತಕ್ಷಣವೇ ಅಕ್ಕಪಕ್ಕದ ನಿವಾಸಿಗಳು ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸುತ್ತಿದ್ದಾಗಲೇ ಅಬ್ದುಲ್‌ ಸಮದ್‌ ಅವರು ಕೊನೆಯುಸಿರೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next