Advertisement

Mangaluru; ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದ ವಾಹನಕ್ಕೆ 5 ಸಾವಿರ ರೂ. ದಂಡ

12:36 AM Jan 11, 2024 | Team Udayavani |

ಮಂಗಳೂರು: ನಗರದ ಎಲ್ಲೆಂದರಲ್ಲಿ ತ್ಯಾಜ್ಯ ಸುರಿದು ಗಲೀಜು ಮಾಡುತ್ತಿರುವ ಪ್ರಕರಣಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಮಂಗಳೂರು ಪಾಲಿಕೆ ತ್ಯಾಜ್ಯ ಸುರಿಯುವವರ ವಿರುದ್ಧ ದಂಡ ಪ್ರಯೋಗವನ್ನು ಮುಂದುವರಿಸಿದೆ.

Advertisement

ತಲಪಾಡಿ ಭಾಗದಿಂದ ತ್ಯಾಜ್ಯವನ್ನು ತಂದು ಪಡೀಲ್‌ ಜಂಕ್ಷನ್‌ನಲ್ಲಿ ಸುರಿಯುತ್ತಿದ್ದ ವಾಹನ ಚಾಲಕನಿಗೆ ಪಾಲಿಕೆ ಅಧಿಕಾರಿಗಳು ಬುಧವಾರ 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಇಂತಹ ವರ್ತನೆಯನ್ನು ಪುನರಾವರ್ತಿಸಿದರೆ ದಂಡ ಮೊತ್ತವನ್ನು ದ್ವಿಗುಣಗೊಳಿಸುವ ಎಚ್ಚರಿಕೆ ನೀಡಲಾಗಿದೆ.

ಪಾಲಿಕೆ ಸೀನಿಯರ್‌ ಹೆಲ್ತ್‌ ಇನ್‌ಸ್ಪೆಕ್ಟರ್‌ ಸಜಿತ್‌, ಪರಿಸರ ಅಧಿಕಾರಿ ಸುಶಾಂತ್‌ ಹಾಗೂ ಸೂಪರ್‌ವೈಸರ್‌ ಪ್ರವೀಣ್‌ ಸ್ಥಳದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next