Advertisement

ಮಂಗಳೂರು:ಹೊಸವರ್ಷದ ಪಾರ್ಟಿ ವೇಳೆ ಸ್ನೇಹಿತನ ಬರ್ಬರ ಹತ್ಯೆ 

09:44 AM Jan 01, 2017 | Team Udayavani |

ಮಂಗಳೂರು: ಇಲ್ಲಿ ಹೊಸವರ್ಷಾಚರಣೆಯ ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನೊಬ್ಬನನ್ನು ಸ್ನೇಹಿತನೇ ಇರಿದು ಕೊಂದ ಘಟನೆ ಶನಿವಾರ ರಾತ್ರಿ ಕುತ್ತಾರು ಜಂಕ್ಷನ್‌ನಲ್ಲಿ ನಡೆದಿದೆ. 

Advertisement

ದಾವಣಗೆರೆ ಮೂಲದ ರುದ್ರಮಣಿ ಸಂತೋಷ್‌(25) ಕೊಲೆಯಾದವನಾಗಿದ್ದು, ಶಿಕಾರಿಪುರದ ಪ್ರದೀಪ್‌ ಎಂಬಾತ ಕೊಲೆಗೈದಿದ್ದಾನೆ ಎಂದು ವರದಿಯಾಗಿದೆ. ಇಬ್ಬರೂ ಸ್ನೇಹಿತರಾಗಿದ್ದು ಮದ್ಯದ ಅಮಲಿನಲ್ಲಿದ್ದರು ಎಂದು  ಹೇಳಲಾಗಿದೆ. 

ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next