Advertisement

ಫೀಲ್ಡ್ ಗೆ ಇಳಿದ ಮಂಗಳೂರು SP, DCP : ಆದೇಶ ಉಲ್ಲಂಘನೆ ಮಾಡಿದವರ ಮೇಲೆ ಕಠಿಣ ಕ್ರಮ

03:06 PM Apr 23, 2021 | Team Udayavani |

ಮಂಗಳೂರು : ನಗರದಲ್ಲಿ ಇಂದು (ಏಪ್ರಿಲ್ 23) ಸಹ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಕೆಲವು ಅಂಗಡಿಗಳನ್ನು ತೆರೆಯಲಾಗಿದೆ. ಯಾವೆಲ್ಲ ಅಂಗಡಿಗಳು ತೆರೆದಿದೆಯೋ ಆ ಅಂಗಡಿಗಳ ಮೇಲೆ ನಗರ ಪೊಲೀಸ್ ಕಮೀಷನರ್ ಮತ್ತು ಡಿ.ಸಿ.ಪಿ ದಾಳಿ ನಡೆಸಿರುವ ಘಟನೆ ನಡೆದಿದೆ.

Advertisement

ಸ್ವತಃ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಡಿ.ಸಿ.ಪಿ ಹರಿರಾಂ ಶಂಕರ್ ಫಿಲ್ಡ್ ಗೆ ಇಳಿದಿದ್ದು, ಮಾರ್ಕೆಟ್ ರೋಡ್, ಹಂಪನಕಟ್ಟೆ, ಫಳ್ನೀರ್ ಭಾಗದ ಅಂಗಡಿಗಳಿಗೆ ದಾಳಿ ಮಾಡಿ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕಂಡು ಅಂಗಡಿ ಮಾಲೀಕರು ಶಟರ್ ಎಳೆದಿದ್ದಾರೆ. ಸರ್ಕಾರದ ಆದೇಶ ಉಲ್ಲಂಘನೆ ಮಾಡಿರುವವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನು ಕೋವಿಡ್ ನಿಯಂತ್ರಣ ಕ್ರಮ ಪಾಲಿಸಿದವರಿಗೆ ಗುಲಾಬಿ ನೀಡಿ ಅಭಿನಂದನೆ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next