Advertisement

ಮಂಗಳೂರು ಮಹಾನಗರ ಪಾಲಿಕೆ: ಹೊಸ ಎಂಜಿನಿಯರ್‌ಗಳ ತಂಡ; ವಾರ್ಡ್‌ವಾರು ಕಾರ್ಯಭಾರ ಇಳಿಕೆ

12:11 AM Sep 17, 2020 | mahesh |

ಮಹಾನಗರ: ಮನಪಾ ಎಂಜಿನಿಯರಿಂಗ್‌ ವಿಭಾಗಕ್ಕೆ ಅಗತ್ಯವಿದ್ದ ಎಂಜಿನಿಯರ್‌ಗಳನ್ನು ನಿಯೋ ಜಿಸಿದ್ದು, ಇದರಿಂದಾಗಿ ಕೊರತೆ ನೀಗಿದಂತಾಗಿದೆ. ಹಾಗಾಗಿ, ಸದ್ಯಕ್ಕೆ ಪಾಲಿಕೆ ವ್ಯಾಪ್ತಿಯಲ್ಲಿ ಎಂಜಿನಿಯರ್‌ಗಳ ಮೇಲಿನ ವಾರ್ಡ್‌ ವಾರು ಕಾರ್ಯಭಾರ ಕಡಿಮೆಯಾಗಲಿದೆ.

Advertisement

ಈ ಹಿಂದೆ ಒಬ್ಬೊಬ್ಬ ಎಂಜಿನಿಯರ್‌ಗಳಿಗೂ ಸುಮಾರು 10 ವಾರ್ಡ್‌ಗಳ ಜವಾ ಬ್ದಾರಿ ಇರುತ್ತಿತ್ತು. ಇದೀಗ ಹೊಸಬರ ನಿಯೋಜನೆಯಿಂದಾಗಿ ಪ್ರತಿಯೋರ್ವ ಎಂಜಿನಿಯರ್‌ಗೆ 3ರಿಂದ 4 ವಾರ್ಡ್‌ಗಳ ಜವಾಬ್ದಾರಿ ಮಾತ್ರ ದೊರೆಯಲಿದೆ. ಇದು ತ್ವರಿತ, ಸಮರ್ಪಕ ಕಾಮಗಾರಿ ಅನುಷ್ಠಾನಕ್ಕೆ ಪೂರಕವಾಗಲಿದೆ.

ಹೊಸಬರ ಸಾಥ್‌
ಪಾಲಿಕೆಯ ಒಟ್ಟು 60 ಕಾರ್ಪೊರೇಟರ್‌ಗಳ ಪೈಕಿ 40 ಮಂದಿ ಕಾರ್ಪೊರೇಟರ್‌ಗಳು ಮೊದಲ ಬಾರಿಗೆ ಆಯ್ಕೆ ಯಾದವರು. ಬಿಜೆಪಿಯ ಒಟ್ಟು 44 ಮಂದಿ ಕಾರ್ಪೊರೇಟರ್‌ಗಳಲ್ಲಿ 34 ಮಂದಿ, ಕಾಂಗ್ರೆಸ್‌ನ 14 ಕಾರ್ಪೊರೇಟರ್‌ಗಳ ಪೈಕಿ 4 ಮಂದಿ, ಎಸ್‌ಡಿಪಿಐನ ಇಬ್ಬರೂ ಕೂಡ ಹೊಸಬರು. ಅಂದರೆ ಪಾಲಿಕೆಯಲ್ಲಿ ಈಗ ಶೇ.66ರಷ್ಟು ಮಂದಿ ಹೊಸ ಕಾರ್ಪೊರೇಟರ್‌ಗಳು. ಎಂಜಿನಿಯರಿಂಗ್‌ ವಿಭಾಗದಲ್ಲಿರುವ ಒಟ್ಟು ಎಂಜಿನಿಯರ್‌ಗಳ ಪೈಕಿ ಸುಮಾರು ಶೇ. 60ಕ್ಕೂ ಅಧಿಕ ಮಂದಿ ಯುವ ಎಂಜಿನಿಯರ್‌ಗಳಿದ್ದಾರೆ. ಈ ಹೊಸ ಎಂಜಿನಿಯರ್‌ಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ.

ಕಾಮಗಾರಿಗಳಿಗೆ ವೇಗ
ಸರಕಾರವು ಪಾಲಿಕೆಗೆ ಅಗತ್ಯವಾಗಿದ್ದ ಎಂಜಿನಿಯರ್‌ಗಳನ್ನು ಒದಗಿಸಿ ಕೊಟ್ಟಿದೆ. ಇದರಿಂದ ವಿವಿಧ ಕಾಮಗಾರಿಗಳು ಸಮರ್ಪಕಾಗಿ, ತ್ವರಿತವಾಗಿ ಪೂರ್ಣಗೊಳ್ಳಲು ಅನುಕೂಲವಾಗಲಿದೆ. ಹಿಂದೆ ಒಬ್ಬೊ ಬ್ಬರು ಎಂಜಿನಿಯರ್‌ಗಳಿಗೆ 10 ವಾರ್ಡ್‌ಗಳ ಜವಾಬ್ದಾರಿ ಬರುತ್ತಿತ್ತು. ಈಗ ಹೊಸ ಎಂಜಿನಿಯರ್‌ಗಳ ನಿಯೋಜನೆಯಿಂದಾಗಿ ಒಬ್ಬೊಬ್ಬರಿಗೆ 3ರಿಂದ 5 ವಾರ್ಡ್‌ಗಳ ಜವಾಬ್ದಾರಿ ದೊರೆಯಲಿದೆ.
-ದಿವಾಕರ ಪಾಂಡೇಶ್ವರ,  ಮೇಯರ್‌, ಮಹಾನಗರ ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next