Advertisement

ಮಂಗಳೂರು : ಹಿಂದು ಸಂಘಟನೆಯ ಕಾರ್ಯಕರ್ತನ ಇರಿದು ಕೊಲೆ

10:38 AM Feb 19, 2017 | Team Udayavani |

ಮಂಗಳೂರು: ಇಲ್ಲಿನ ಮರೋಳಿ ಎಂಬಲ್ಲಿನ ನಿಡ್ಡೇಲು ಪ್ರದೇಶದಲ್ಲಿ  ಹಿಂದು ಜಾಗರಣ ವೇದಿಕೆ ಕಾರ್ಯಕರ್ತನೊಬ್ಬನನ್ನು ಅದೇ ಸಂಘಟನೆಗೆ ಸೇರಿದ ಕಾರ್ಯಕರ್ತರು ಶನಿವಾರ ತಡರಾತ್ರಿ ಇರಿದು ಬರ್ಬರವಾಗಿ ಕೊಲೆಗೈದಿರುವ ಘಟನೆ ನಡೆದಿದೆ. 

Advertisement

ಪ್ರತಾಪ್‌ (28) ಎಂಬಾತತನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಹತ್ಯೆಗೈದಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಮಣಿಕಂಠ ಸಣ್ಣ ಪುಟ್ಟಗಾಯಗಳೊಂದಿಗೆ ಪಾರಾಗಿದ್ದು , ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಶಾಂತ್‌ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ. 

ಕಂಕನಾಡಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದು ಈ ಗಾಗಲೇ 6 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. 

ಪ್ರತಾಪ್‌ ಮೈಸೂರಿನಲ್ಲಿ ಉದ್ಯೋಗಿಯಾಗಿದ್ದು ಮನೆಗೆ ರಜೆಯಲ್ಲಿ ಬಂದಿದ್ದ ಎಂದು ತಿಳಿದು ಬಂದಿದೆ.

ಕಳ್ಳತನ ಮಾಹಿತಿ ನೀಡಿದ್ದೆ ಕೊಲೆಗೆ ಕಾರಣ? 
ಈ ಹಿಂದೆ ಹಿಂಜಾವೇಗೆ ಸೇರಿದ ಕಾರ್ಯಕರ್ತರು ಯಕ್ಷಗಾನ ಕಲಾವಿದರೊಬ್ಬರ ಬ್ಯಾಗ್‌ನಿಂದ ಹಣ ಕಳವು ಮಾಡಿದ್ದರು. ಈ ಮಾಹಿತಿಯನ್ನು ಪ್ರತಾಪ್‌ ನೀಡಿದ್ದು ಇದೇ ಸೇಡಿನಲ್ಲಿ ಕೊಲೆಗೈಯಲಾಗಿದೆ ಎಂದು ಹೇಳಲಾಗಿದ್ದು, ಇನ್ನೊಂದೆಡೆ ಪಂಪ್‌ವೆಲ್‌ನಲ್ಲಿ ನಡೆದ ಬ್ಯಾನರ್‌ ವಿವಾದವೂ ಕಾರಣ ಎನ್ನಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next