Advertisement

ಮಂಡ್ಯ; ಶ್ರೀಕಂಠೇಗೌಡ ವಿರುದ್ಧ ಅಂಬಿ ಅಭಿಮಾನಿಗಳ ಪ್ರತಿಭಟನೆ, ಆಕ್ರೋಶ

12:44 PM Feb 04, 2019 | Sharanya Alva |

ಮಂಡ್ಯ: ಸುಮಲತಾ ಮಂಡ್ಯ ಗೌಡತಿ ಅಲ್ಲ, ಆಂಧ್ರ ಗೌಡ್ತಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಧಾನಪರಿಷತ್ ಸದಸ್ಯ ಕೆಟಿ ಶ್ರೀಕಂಠೇಗೌಡ ವಿರುದ್ಧ ಅಂಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ ಸೋಮವಾರ ಸಂಜೆ ಮದ್ದೂರಿನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

Advertisement

ನಟಿ ರಮ್ಯಾಳನ್ನು ಮಂಡ್ಯ ಜನ ನೋಡಿ ಆಗಿದೆ. ಅವರು ಎಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ ಅಂತ ಗೊತ್ತಿದೆ. ಅಂಬರೀಶ್ ಕಡೇ ದಿನಗಳಲ್ಲಿ ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸಲಿಲ್ಲ. ಜನ ಸೋಲಿಸುತ್ತಾರೆ ಅಂತ ಅವರಿಗೆ ಚೆನ್ನಾಗಿ ಗೊತ್ತಿತ್ತು. ಈಗ ಸುಮಲತಾ ಅವರನ್ನು ಗೆಲ್ಲಿಸಿದರೆ ಎಲ್ಲಿ ಹುಡುಕುತ್ತೀರಿ ಎಂದು ಶ್ರೀಕಂಠೇಗೌಡ ವಾಗ್ದಾಳಿ ನಡೆಸಿದ್ದರು.

ನಟಿ ಸುಮಲತಾ ಹಾಗೂ ದಿ.ಅಂಬರೀಶ್ ವಿರುದ್ಧ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ವಿರುದ್ಧ ಅಂಬಿ ಫ್ಯಾನ್ಸ್ ಬೀದಿಗಿಳಿದಿದ್ದಾರೆ. ಮದ್ದೂರಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಅಲ್ಲದೇ ಶ್ರಿಕಂಠೇಗೌಡ ಅವರ ಪ್ರತಿಕೃತಿ ಸುಟ್ಟು, ಬೆಂಗಳೂರು, ಮೈಸೂರು ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿ, ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next