Advertisement

Magadi; ಸಾವನದುರ್ಗ ಚಾರಣ ಏರಿದ ಯುವಕ ನಾಪತ್ತೆ; 48 ಗಂಟೆಯಾದರೂ ಸಿಗದ ಯುವಕ

03:04 PM Dec 26, 2023 | Team Udayavani |

ರಾಮನಗರ: ಸ್ನೇಹಿತನ ಜೊತೆ ಸಾವನದುರ್ಗ ಚಾರಣ ಏರಿದ ಯುವಕ ನಾಪತ್ತೆಯಾಗಿ 48 ತಾಸು ಕಳೆದರೂ ಪತ್ತೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಮಾಗಡಿ ತಾಲೂಕಿನ ಸಾವನದುರ್ಗ ಬೆಟ್ಟಕ್ಕೆ ಚಾರಣಕ್ಕೆ ತಲುಪಿದ್ದ ಉತ್ತರ ಪ್ರದೇಶ ಮೂಲದ ಗಗನ್ ದೀಪ್ ಸಿಂಗ್ (30) ಕಾಣೆಯಾಗಿದ್ದಾನೆ.

ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಗಗನ್, ಭಾನುವಾರ ರಜೆ‌ ಹಿನ್ನೆಲೆಯಲ್ಲಿ ಸ್ನೇಹಿತನ‌ ಜೊತೆ ಚಾರಣ ಏರಿದ್ದ. ಅಂದು ಸುಮಾರು ಗಂಟೆ ಸುಮಾರಿಗೆ ಆತ ನಾಪತ್ತೆಯಾಗಿದ್ದಾನೆ. ಚಾರಣ ಏರಿ ಇಳಿಯಲು ಸರಿಯಾದ ಮಾರ್ಗವಿಲ್ಲದಿರುವುದೇ ಯುವಕನ ನಾಪತ್ತೆಗೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ:Sirsi:ಎಲ್ಲರ ಜೊತೆ ಚರ್ಚೆ ಮಾಡಿ ಚುನಾವಣೆ ಕುರಿತು ಅಂತಿಮ ತೀರ್ಮಾನ: ಸಂಸದ ಅನಂತ ಕುಮಾರ ಹೆಗಡೆ

ಭಾನುವಾರದಿಂದ ಬೆಟ್ಟದ ಮೇಲೆಲ್ಲ ಯುವಕನಿಗಾಗಿ ಪೊಲೀಸರು, ಅರಣ್ಯಾಧಿಕಾರಿಗಳು, ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ. ಯುವಕನಿಗಾಗಿ ಸುಮಾರು 30 ಕ್ಕೂ ಹೆಚ್ಚು ಅಧಿಕಾರಿಗಳು, ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ.  ಡ್ರೋನ್ ಬಳಸಿ ಹುಡುಕಾಟ ನಡೆಸಲಾಗುತ್ತಿದೆ.

Advertisement

ಗಗನ್ ನಾಪತ್ತೆಯಿಂದಾಗಿ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ಆತನಿಗಾಗಿ ಸಾವನದುರ್ಗ ಚಾರಣದಲ್ಲಿ ಕುಟುಂಬವೂ ಹುಡುಕಾಡುತ್ತಿದೆ. ಭಾನುವಾರದಿಂದ ಪೊಲೀಸರು, ಅರಣ್ಯಾಧಿಕಾರಿಗಳು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

ಮಾಗಡಿ ಠಾಣೆಯಲ್ಲಿ ‌ನಾಪತ್ತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next