Advertisement

ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರದ ಬಳಿ ಪೊಲೀಸರನ್ನು ನಿಂದಿಸಿದವನಿಗೆ ಅರೆಬೆತ್ತಲೆ ಶಿಕ್ಷೆ

04:18 PM Jun 27, 2020 | keerthan |

ವಿಜಯಪುರ: ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರದ ಬಳಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬ ಬುದ್ದಿ ಹೇಳಲು ಬಂದ ಪೊಲೀಸರಿಗೆ ನಿಂದಿಸಿ, ಪರಿಣಾಮವಾಗಿ ಪೊಲೀಸರ ಅತಿಥಿಯಾದ ಘಟನೆ ಮುದ್ದೇಬಿಹಾಳದ ರಕ್ಕಸಗಿಯಲ್ಲಿ ನಡೆದಿದೆ.

Advertisement

ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ರಕ್ಕಸಗಿ ಗ್ರಾಮದ ಪರೀಕ್ಷಾ ಕೇಂದ್ರದ‌ ಸುತ್ತ ಓಡಾಡುವರನ್ನು ಪೊಲೀಸರು ನಿಷೇಧಾಜ್ಞೆ ಜಾರಿ ಇರುವುದನ್ನು ತಿಳಿಸಿ, ಅಲ್ಲಿಂದ ತೆರಳುವಂತೆ ಸೂಚಿಸುತ್ತಿದ್ದರು.

ಈ ಹಂತದಲ್ಲಿ ಓರ್ವ ವ್ಯಕ್ತಿ ತಿಳಿ ಹೇಳಿದ ಪೊಲೀಸರನ್ನೇ ನಿಂದಿಸಿ, ಕೂಗಾಟ ಆರಂಭಿಸಿದ್ದಾನೆ. ಇದರಿಂದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಮಸ್ಯೆ ಉಂಟು ಮಾಡಿದ್ದಾನೆ.

ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಬಟ್ಟೆ ಬಿಚ್ಚಿಸಿ, ಅರೆ ಬೆತ್ತಲೆ ಸ್ಥಿತಿಯಲ್ಲಿ ಜೀಪನಲ್ಲಿ ಕೂಡಿಸಿ, ಶಿಕ್ಷೆ ನೀಡಿದ್ದಾಗಿ ವರದಿಯಾಗಿದೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next