Advertisement

ಮಲ್ಪೆ: ನಿತ್ಯ ಸಂಚಾರ ದಟ್ಟಣೆ; ಮುಗಿಯದ ಪರದಾಟ

06:30 AM May 20, 2018 | Team Udayavani |

ಮಲ್ಪೆ: ಪ್ರವಾಸೋದ್ಯಮ ಕೇಂದ್ರವಾಗಿ ಮತ್ತು ಉದ್ಯಮ ವಲಯವಾಗಿ ಕ್ಷಿಪ್ರವಾಗಿ ಬೆಳೆಯು ತ್ತಿರುವ ಮಲ್ಪೆಯಲ್ಲಿ ನಿತ್ಯ ಸಂಚಾರ ದಟ್ಟಣೆ ಅಸಹನೀಯವನ್ನಾಗಿಸಿದೆ.
  
ಮಲ್ಪೆಯ ಮುಖ್ಯರಸ್ತೆಯೂ ಆಗಿರುವ ಇಕ್ಕಟ್ಟಾದ ಹೆದ್ದಾರಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ  ವಾಹನಗಳು ಸಂಚರಿಸುತ್ತಿದ್ದು, ಟ್ರಾಫಿಕ್‌ ಜಾಮ್‌ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.  ಬೆಳಗ್ಗೆ, ಸಂಜೆಯ ವೇಳೆಯಂತೂ ಟ್ರಾಫಿಕ್‌ ಸಮಸ್ಯೆ ವಿಪರೀತವಾಗಿದೆ.

Advertisement

50 ವರ್ಷಗಳಿಂದಲೂ ಪರಿಹಾರವಿಲ್ಲ! 
ಮಲ್ಪೆ ಪ್ರಮುಖ ಮೀನುಗಾರಿಕಾ ಬಂದರು ಆಗಿ ಅಭಿವೃದ್ಧಿ ಹೊಂದು ತ್ತಿದ್ದರೂ ಅದಕ್ಕೆ ಪೂರಕದ ರಸ್ತೆಯ ಅಗಲೀ ಕರಣ ಮತ್ತು ಅಭಿವೃದ್ಧಿ ಅಗುತ್ತಿಲ್ಲ. 50-60 ವರ್ಷಗಳ ಹಿಂದೆ ಇದ್ದ ಇಕ್ಕಟ್ಟಾ ಗಿರುವ ರಸ್ತೆ ಈಗಲೂ ಅದೇ ರೀತಿ ಇದೆ. ರಸ್ತೆ ಅಗಲೀಕರಣ ಆಗುತ್ತದೆ ಎಂಬ ಮಾತು ಕಳೆದ 40 ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ರಾಜ್ಯ ಹೆದ್ದಾರಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ ಅಗಲೀಕರಣ ಮಾತ್ರ ಆಗಿಲ್ಲ.  

2 ಕಿ.ಮೀ. ದಟ್ಟಣೆ
ಮಲ್ಪೆಯ ಸರ್ಕಲಿನಿಂದ ಹಿಡಿದು ಕಲ್ಮಾಡಿವರೆಗೂ ಸುಮಾರು ಎರಡು ಕಿ.ಮೀ. ಉದ್ದಕ್ಕೆ ಪದೇ ಪದೇ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ.  ಸಂಚಾರಿ ಪೋಲಿಸರು ಅದೆಷ್ಟೋ ಹರಸಾಹಸ ಪಟ್ಟರೂ ಸಂಚಾರ ಸುಗಮಗೊಳಿಸಲು ಸಾಧ್ಯವಾಗುತ್ತಿಲ್ಲ. ನಿತ್ಯ ಸಂಚಾರದ ಬಸ್ಸುಗಳಲ್ಲದೆ ಸಾವಿರಾರು ಸಂಖ್ಯೆಯಲ್ಲಿ  ಮೀನು ಸಾಗಾಟ, ಮಂಜುಗಡ್ಡೆ ಸಾಗಾಟದ ಲಾರಿಗಳು, ಟೆಂಪೋ, ರಿಕ್ಷಾಗಳು ನಿತ್ಯ ಓಡಾಡುತ್ತವೆ. ಜತೆಗೆ ಅಷ್ಟೇ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ರಸ್ತೆಗಿಳಿಯುತ್ತವೆ. ಜತೆಗೆ ಸೈಂಟ್‌ಮೇರೀಸ್‌ ದ್ವೀಪಕ್ಕೆ ತೆರಳುವ ಪ್ರವಾಸಿಗರೂ ಇದೇ ಮಾರ್ಗದಲ್ಲಿ ಸಂಚರಿಸುವುದರಿಂದ ವಾಹನ ದಟ್ಟಣೆ ಸಮಸ್ಯೆ ಬಿಗಡಾಯಿಸಿದೆ.

ಪರ್ಯಾಯ ಮಾರ್ಗದ ವ್ಯವಸ್ಥೆ ಬೇಕು
ಬಂದರಿನಿಂದ ಒಳ ಹೊರಗೆ ಹೋಗುವ ವಾಹನಗಳು, ತೊಟ್ಟಂ, ಕೊಡವೂರಿನಿಂದ ಮಲ್ಪೆ ಮೂಲಕ ಬರುವ ವಾಹನಗಳು ಮೂರು ರಸ್ತೆ ಸಂಧಿಸುವಲ್ಲಿ ಸಮಸ್ಯೆ ಉಂಟಾಗುತ್ತದೆ. ಸಿಟಿ ಬಸ್ಸುಗಳು ಪ್ರಯಾಣಿಕರನ್ನು ಈ ಮೂರು ರಸ್ತೆ ಕೂಡುವಲ್ಲಿ ಹತ್ತಿಸಿ, ಇಳಿಸುತ್ತಿರುವುದರಿಂದ ಸಮಸ್ಯೆ ಸೃಷ್ಟಿ ಆಗುತ್ತಿದೆ. ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಕಲ್ಪಿಸಿದರೆ ಈ ಹೆದ್ದಾರಿಯಲ್ಲಿ ಉಂಟಾಗುವ ವಾಹನ ದಟ್ಟಣೆಗೆ ಬ್ರೇಕ್‌ ಹಾಕಿದಂತಾಗುತ್ತದೆ ಎಂಬುವುದು ನಾಗರಿಕರ ಅಭಿಪ್ರಾಯ.

ರಸ್ತೆ ವಿಸ್ತರಣೆ ಅಗತ್ಯ
ಇಲ್ಲಿನ ಪ್ರತಿದಿನವೂ ಟ್ರಾಫಿಕ್‌ ಜಾಮ್‌ ಸಮಸ್ಯೆ ಎದುರಾಗುತ್ತಿದೆ. ಇಕ್ಕಟ್ಟಾದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿರುವಾಗ ಕೆಲವರು ರಸ್ತೆಯಲ್ಲೇ ಪಾರ್ಕಿಂಗ್‌ ಮಾಡಿ ತೆರಳುತ್ತಾರೆ. ಮುಖ್ಯವಾಗಿ ಇಲ್ಲಿನ ರಸ್ತೆಯ ವಿಸ್ತರಣೆ ಅತೀ ಶೀಘ್ರದಲ್ಲಿ ಆದರೆ ಎಲ್ಲ ಸಮಸ್ಯೆಗೆ ಪರಿಹಾರ ದೊರೆತಂತಾಗುತ್ತದೆ.
– ಸುರೇಶ್‌ ಕರ್ಕೇರ, ಮಲ್ಪೆ

Advertisement

ಸರಕಾರ ಗಮನ ಹರಿಸಲಿ
ಮಲ್ಪೆ ಆದಿವುಡುಪಿ ರಸ್ತೆ ವಿಸ್ತರಣೆ ನನೆಗುದಿಗೆ ಬಿದ್ದಿರುವುದು, ನಗರದಲ್ಲಿ ವಾಹನದ ದಟ್ಟಣೆ ಹೆಚ್ಚಾಗಿರುವುದು ಟ್ರಾಫಿಕ್‌ ಜಾಮ್‌ ಸಮಸ್ಯೆಗೆ ಕಾರಣವಾಗಿದೆ. ಹೊಸ ಸರಕಾರ ಈ ಬಗ್ಗೆ ಹೆಚ್ಚಿನ ಗಮನಹರಿಸಿ ಸಮಸ್ಯೆ ಬಗೆಹರಿಸುವತ್ತ ಮುತುವರ್ಜಿ ವಹಿಸಬೇಕಾಗಿದೆ.
– ಪ್ರದೀಪ್‌ ಟಿ. ಮೆಂಡನ್‌, ಕಲ್ಮಾಡಿ

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next