Advertisement

ಮಲ್ಪೆ: ಸೇತುವೆ ಮೇಲೆ ಸ್ಕೂಟರ್‌ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

05:49 PM Oct 27, 2022 | Team Udayavani |

ಮಲ್ಪೆ: ಕೆಮ್ಮಣ್ಣು ನೇಜಾರು ಎಂಬಲ್ಲಿಂದ 10ದಿನಗಳ ಹಿಂದೆ ನಾಪತ್ತೆಯಾಗಿದ್ದ ಪ್ರವೀಣ್‌ ಬೆಳ್ಚಾಡ ಎಂಬವರ ಮೃತದೇಹವು ಗುರುವಾರ ಬ್ರಹ್ಮಾವರದ ಹಂದಾಡಿ ಕಂಬಳಗದ್ದೆಯ ಹೊಳೆ ಬದಿಯಲ್ಲಿ ಪತ್ತೆಯಾಗಿದೆ. ಈಶ್ವರ ಮಲ್ಪೆ ಅವರು ಹೊಳೆಯಿಂದ ಶವವನ್ನು ಹೊರತೆಗಿದ್ದಾರೆ.

Advertisement

ಪ್ರವೀಣ್‌ ಅವರು ಅ. 18ರಂದು ರಾತ್ರಿ ಸ್ಕೂಟರ್‌ ಸಮೇತ ಕಾಣೆಯಾಗಿದ್ದರು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರ ದಾಖಲಾಗಿತ್ತು. ಆವರು ನಾಪತ್ತೆಯಾಗುವ ಮುನ್ನ ಡೆತ್‌ನೋಟನ್ನು ಬರೆದು ಮನೆಯಲ್ಲಿಟ್ಟಿದ್ದರು. ಕೆಲ ದಿನಗಳ ಹಿಂದೆ ಬ್ರಹ್ಮಾವರ ಸೇತುವೆಯ ಬಳಿ ಪ್ರವೀಣ್‌ ಸ್ಕೂಟರ್‌ ಪತ್ತೆಯಾಗಿತ್ತು. ಪ್ರವೀಣ್‌ಗಾಗಿ ಅಗ್ನಿಶಾಮಕ ದಳ, ಪೋಲೀಸರ ಸಹಕಾರದೊಂದಿಗೆ ಮುಳುಗು ತಜ್ಞ ಈಶ್ವರ್‌ ಮಲ್ಪೆ ತಂಡ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿತ್ತು. ಆದರೆ ಪ್ರವೀಣ್‌ ಮೃತದೇಹ ಪತ್ತೆಯಾಗಿರಲಿಲ್ಲ. ಗುರುವಾರ ಹಂದಾಡಿ ಕಂಬಳಗದ್ದೆಯ ಹೊಳೆ ಬದಿಯಲ್ಲಿ ಪ್ರವೀಣ್‌ ಮೃತದೇಹ ಪತ್ತೆಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next