Advertisement

ಮಲಬಾರ್‌ ಗೋಲ್ಡ್‌ಮಳಿಗೆ ಉದ್ಘಾಟನೆ

11:20 AM Oct 09, 2017 | |

ಬೀದರ: ಚಿನ್ನ ಮತ್ತು ವಜ್ರಾಭರಣಗಳ ರಿಟೇಲ್‌ ವ್ಯವಹಾರದಲ್ಲಿ ಮನ್ನಣೆ ಪಡೆದಿರುವ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ತನ್ನ 194ನೇ ಮಳಿಗೆಯನ್ನು ರವಿವಾರ ನಗರದಲ್ಲಿ ಆರಂಭಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌ ರಿಟೇಲ್‌ ಆಭರಣ ವ್ಯವಹಾರದಲ್ಲಿ ಉತ್ಕೃಷ್ಣತೆ, ಅದ್ವಿತೀಯ ಗುಣಮಟ್ಟಕ್ಕೆ ಗುರುತಿಸಿಕೊಂಡಿದ್ದು, ಗ್ರಾಹಕರ ಸೇವೆಗೆ ಕರ್ನಾಟಕದಲ್ಲಿ ಇನ್ನೂ ಹೆಚ್ಚಿನ ಮಾನ್ಯತೆ ಪಡೆಯುವ ಭರವಸೆ ಇದೆ ಎಂದು ಹೇಳಿದರು.

ಮಲಬಾರ್‌ನ ಮುಖ್ಯಸ್ಥ ಎಂಪಿ ಅಹ್ಮದ್‌ ಮಾತನಾಡಿ, ಕರ್ನಾಟಕದಲ್ಲಿ ಸ್ಥಾಪಿತ ಗ್ರಾಹಕರ ನೆಲೆಯಿದ್ದು, ನಮ್ಮ ಸಮಗ್ರ ಚಿನ್ನ ಮತ್ತು ವಜ್ರಾಭರಣಗಳ ಉತ್ಪನ್ನಗಳಿಗೆ ವ್ಯಾಪಕ ಮಾರುಕಟ್ಟೆ ದೊರೆಯುವ ಭರವಸೆ ಇದೆ. ಗ್ರಾಹಕರ ಹಣಕ್ಕೆ ಉತ್ತಮ ಮೌಲ್ಯದ ವ್ಯವಹಾರಗಳನ್ನು ನೀಡಲು ಕಂಪನಿ ಸಿದ್ಧವಿದೆ ಎಂದು ಹೇಳಿದರು.

ವ್ಯವಸ್ಥಾಪಕ ನಿರ್ದೇಶಕ ಅರಶದ್‌ ಮಾತನಾಡಿ, ಮಲಬಾರ್‌ ನಂಬಿಕೆ, ಪಾರದರ್ಶಕತೆ ಮತ್ತು ಬೆಲೆಯಾಧಾರಿತ ಮೌಲ್ಯಕ್ಕೆ ಹೆಸರಾಗಿದೆ ಎಂದರು. ಕರ್ನಾಟಕದ ಗ್ರಾಹಕರಿಗಾಗಿ ವಿಶೇಷ ದೀಪಾವಳಿ ಕೊಡುಗೆಗಳನ್ನು ಘೋಷಿಸಲಾಗಿದೆ. ಈ ಕೊಡುಗೆ ಅ.31ರ ವರಗೆ ಇರಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next