Advertisement

ಮೇಲ್ಮನೆಗೆ ಉದ್ಧವ್‌ ಠಾಕ್ರೆ ಅವಿರೋಧ ಆಯ್ಕೆ?

03:12 AM May 12, 2020 | Hari Prasad |

ಮುಂಬಯಿ: ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ, 21ರಂದು ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

Advertisement

ಈ ವೇಳೆ ಪತ್ನಿ ರಶ್ಮಿ ಠಾಕ್ರೆ, ಪುತ್ರ ಮತ್ತು ಸಚಿವ ಆದಿತ್ಯ ಠಾಕ್ರೆ ಹಾಗೂ ಶಿವಸೇನೆ ನಾಯಕರು ಜತೆಗಿದ್ದರು.
ಇದೇ ವೇಳೆ ಉದ್ಧವ್‌ ಠಾಕ್ರೆ ಅವರೊಂದಿಗೆ ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್‌ ಅಘಾಡಿಯ ಮೈತ್ರಿ ಪಕ್ಷಗಳ ನಾಲ್ವರು ಸದಸ್ಯರೂ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಇದೇ ವೇಳೆ ಒಟ್ಟು 9 ಸ್ಥಾನಗಳಿಗೆ 9 ಮಂದಿ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿರುವುದರಿಂದ ಸಿಎಂ ಉದ್ಧವ್‌ ಸೇರಿ ಅಭ್ಯರ್ಥಿಗಳ ಆಯ್ಕೆ ಅವಿರೋಧವೇ ಆಗುವ ಸಾಧ್ಯತೆ ಇದೆ.

ಒಂದು ಸ್ಥಾನಕ್ಕೆ ಕಾಂಗ್ರೆಸ್‌ ಸಲ್ಲಿಸಿದ್ದ 2 ನಾಮಪತ್ರಗಳ ಪೈಕಿ ಒಂದನ್ನು ವಾಪಸ್‌ ಪಡೆದಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಾಧ್ಯವಾಗಲಿದೆ. ಈ ನಡುವೆ ಬಿಜೆಪಿ ಸಹ ನಾಲ್ವರು ಸ್ಪರ್ಧಿಗಳ ಹೆಸರುಗಳನ್ನು ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next