Advertisement

Maharaja Trophy ಕ್ರಿಕೆಟ್‌ 4ನೇ ಜಯ: ಮೈಸೂರು ಅಗ್ರಸ್ಥಾನಕ್ಕೆ

01:03 AM Aug 23, 2024 | Team Udayavani |

ಬೆಂಗಳೂರು: ಮಹಾರಾಜ ಟ್ರೊಫಿ ಟಿ20 ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ ತಂಡ ತನ್ನ 4ನೇ ಜಯ ದಾಖಲಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಅದು ಶಿವಮೊಗ್ಗ ಲಯನ್ಸ್‌ ವಿರುದ್ಧ 28 ರನ್‌ಗಳ ಜಯ ಗಳಿಸಿದೆ. ಇದರೊಂದಿಗೆ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ಮೈಸೂರು, ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಇತ್ತ ಶಿವಮೊಗ್ಗ ತಂಡ ಸತತ 6ನೇ ಪಂದ್ಯ ಸೋತು ತೀವ್ರ ಮುಖಭಂಗಕ್ಕೀಡಾಗಿದೆ.

Advertisement

ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ಮೈಸೂರು ಪರ ಅಗ್ರ ಕ್ರಮಾಂಕದ ಕಾರ್ತಿಕ್‌ ಮತ್ತು ನಾಯಕ ಕರುಣ್‌ ನಾಯರ್‌ ಉತ್ತಮ ರನ್‌ ಕಾಣಿಕೆ ನೀಡಿದರು. ಕಾರ್ತಿಕ್‌ 30 ರನ್‌ ಸೇರಿಸಿದರೆ, ಕರುಣ್‌ 23 ಎಸೆತಗಳಲ್ಲಿ 45 ರನ್‌ ಸಿಡಿಸಿದರು. ಸುಮಿತ್‌ ಕುಮಾರ್‌ (28), ಮನೋಜ್‌ ಭಾಂಡಗೆ (23), ಜೆ. ಸುಚಿತ್‌ (22) ರನ್‌ನೊಂದಿಗೆ ಮೈಸೂರು ನಿಗದಿತ 20 ಓವರ್‌ಗಳಲ್ಲಿ 179 ರನ್‌ ಕಲೆ ಹಾಕಿತು. ಈ ವೇಳೆ ಶಿವಮೊಗ್ಗದ ಎಚ್‌.ಎಸ್‌.ಶರತ್‌ 29 ರನ್‌ಗೆ 4 ವಿಕೆಟ್‌ ಕೆಡವಿ ಗಮನ ಸೆಳೆದರು.

ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್‌ ಮಾಡಿದ ಶಿವಮೊಗ್ಗ ಲಯನ್ಸ್‌ ತಂಡದ ಅಗ್ರ ಬ್ಯಾಟಿಂಗ್‌ ಕ್ರಮಾಂಕ ವೈಫ‌ಲ್ಯ ಅನುಭವಿಸಿತು. ನಿಹಾಲ್‌ ಉಲ್ಲಾಳ್‌ 46, ಅಭಿನವ್‌ ಮನೋಹರ್‌ 46 ರನ್‌ ಕೊಡುಗೆ ಬಿಟ್ಟರೆ ಉಳಿದೆಲ್ಲರೂ ಅಲ್ಪ ರನ್‌ಗೆ ನಿರ್ಗಮಿಸಿದರು. 20 ಓವರ್‌ಗಳಲ್ಲಿ ಲಯನ್ಸ್‌ 151 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಬೆಂಗಳೂರು ಬ್ಲಾಸ್ಟರ್ಗೆ ಜಯ
ದಿನದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ ತಂಡವು ಮಂಗಳೂರು ಡ್ರ್ಯಾಗನ್ಸ್‌ ತಂಡವನ್ನು 6 ರನ್ನುಗಳಿಂದ ಸೋಲಿಸಿದೆ. ಬ್ಲಾಸ್ಟರ್ ತಂಡವು 144 ರನ್‌ ಗಳಿಸಿದ್ದರೆ ಡ್ರ್ಯಾಗನ್ಸ್‌ ತಂಡವು 7 ವಿಕೆಟಿಗೆ 138 ರನ್‌ ಗಳಿಸಲಷ್ಟೇ ಶಕ್ತವಾಯಿತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next