Advertisement

Protest: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ದೆಹಲಿಯಲ್ಲಿ ರೈತರ ಪ್ರತಿಭಟನೆ

02:35 PM Dec 18, 2023 | Team Udayavani |

ಹುಬ್ಬಳ್ಳಿ: ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ಆಗ್ರಹಿಸಿ ಜನವರಿಯಲ್ಲಿ ದೆಹಲಿಯಲ್ಲಿ ಸಂಸತ್ತು ಭವನ ರಸ್ತೆಯಲ್ಲಿ ಪ್ರತಿಭಟನೆಗೆ ರೈತರು ನಿರ್ಧಾರಿಸಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತಸೇನಾ ಕರ್ನಾಟಕ ಸಂಸ್ಥಾಪಕ ವೀರೇಶ ಸೊಬರದಮಠ, ಯೋಜನೆ ಜಾರಿಗೆ ಪ್ರಧಾನಿಯವರ ಗಮನ ಸಳೆಯಲು ಈ ಹೋರಾಟ ಕೈಗೊಳ್ಳಲಾಗುತ್ತಿದೆ ಎಂದರು.

ಮಹದಾಯಿ ವ್ಯಾಪ್ತಿಯ ಉತ್ತರ ಕರ್ನಾಟಕದ 4 ಜಿಲ್ಲೆಗಳ 11 ತಾಲೂಕಿನ ರೈತರು ದೆಹಲಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ಆಗ್ರಹಿಸಿ ಡಿ.16 ರಿಂದ ಪ್ರಧಾನಿ, ಕೇಂದ್ರ ಗೃಹ ಹಾಗೂ ಜಲಸಂಪನ್ಮೂಲ ಸಚಿವರು, ರಾಜ್ಯದ 28 ಸಂಸದರಿಗೆ ನಿರಂತರ ಪತ್ರ ಚಳವಳಿ ಆರಂಭಿಸಲಾಗಿದೆ ಎಂದರು.

ಯೋಜನೆಗೆ ಇರುವ ಅಡ್ಡಿ ನಿವಾರಣೆ ಹಾಗೂ ಅಗತ್ಯ ಪರವಾನಿಗೆ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಯೋಜನೆಗೆ ಕೇಂದ್ರದಿಂದ ಪರವಾನಿಗೆ ಕೊಡಿಸುವುದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ದೊಡ್ಡ ವಿಷಯವೇನು ಅಲ್ಲ ಅವರು ಪ್ರಮಾಣಿಕ ಯತ್ನ ಮಾಡಬೇಕಾಗಿದೆ ಎಂದರು.

Advertisement

ಲೋಕಸಭಾ ಚುನಾವಣೆ ಮುನ್ನವೇ ಯೋಜನೆ ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ: ರೈತರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ… ಅಧಿಕಾರಿಗಳಿಗೆ ನೂತನ ಜಿಲ್ಲಾಧಿಕಾರಿ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next