Advertisement

ಮಹದಾಯಿ; ಬಿಜೆಪಿಗೆ ತಿರುಗುಬಾಣ: ರೆಡ್ಡಿ

08:41 AM Dec 28, 2017 | |

ಬೆಂಗಳೂರು: ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ಬಿಜೆಪಿ ಮಾಡಿದ ನಾಟಕ ಅವರಿಗೇ ತಿರುಗುಬಾಣವಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನೀರು ತರಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರೈತರ ಬಳಿ ಹೋಗಿ 15 ದಿನದಲ್ಲಿ ಸಿಹಿಸುದ್ದಿ ತರುತ್ತೇನೆ ಎಂದು ಮಾತು ಕೊಟ್ಟಿದ್ದಾರೆ. ಗೋವಾ ಮುಖ್ಯಮಂತ್ರಿ ರಾಜ್ಯದ ಸಿಎಂ ಅಥವಾ ಸರ್ಕಾರಕ್ಕೆ ಪತ್ರ ಬರೆಯದೇ ಬಿಎಸ್‌
ವೈಗೆ ಬರೆದರು. ಇದರಿಂದ ಯಾವುದೇ ಉಪಯೋಗವಿಲ್ಲ. 

Advertisement

ಬಿಜೆಪಿಯವರ ನಾಟಕಗಳು ರೈತರಿಗೆ ಗೊತ್ತಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಗೊಂದಲಗಳಿಗೆ ಬಿಜೆಪಿಯೇ ನೇರಕಾರಣ ಎಂದು ಟೀಕಿಸಿದರು. ಕೈಲಾಗದವರು ಮೈ ಪರಚಿಕೊಂಡಂತೆ ಬಿಜೆಪಿ ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಮುಂದಾಗಿದೆ. ಪ್ರತಿಭಟನೆ ಮಾಡಲಿ ನಾವೇನು ಬೇಡ ಎಂದು ಹೇಳಿಲ್ಲ. ರೈತರಿಗೆ ಪ್ರಾಣ ಸಂಕಟ, ಇವರಿಗೆ ಚೆಲ್ಲಾಟವಾದಂತಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next