Advertisement

ಜೂನ್‌ 7ರ ಒಳಗೆ ಕೃಷಿ ವಿಮೆ ಕ್ಲೇಮ್‌ ಇತ್ಯರ್ಥ: ಮಹಾ ಸಿಎಂ ಆದೇಶ

03:46 PM May 30, 2018 | udayavani editorial |

ಮುಂಬಯಿ : ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್‌ ಅವರಿಂದು ರಾಜ್ಯದ ರೈತರ ಕೃಷಿ ಕ್ಲೇಮನ್ನು ಜೂನ್‌ 7ರೊಳಗೆ ಇತ್ಯರ್ಥಪಡಿಸಿ ಅದರ ಮೊತ್ತವನ್ನು ಅವರ ಬ್ಯಾಂಕ್‌ ಖಾತೆಗೆ ಜಮೆ ಮಾಡುವಂತೆ ವಿಮಾ ಕಂಪೆನಿಗಳಿಗೆ ಆದೇಶಿಸಿದ್ದಾರೆ.

Advertisement

ಪ್ರಧಾನಿಯವರ ಬೆಳೆ ವಿಮೆ ಯೋಜನೆಯ ಪರಿಣಾಮದ ಪುನರ್‌ ವಿಮರ್ಶೆ ಸಭೆಯಲ್ಲಿ ಫ‌ಡ್ನವೀಸ್‌ ಅವರು ವಿಮಾ ಕಂಪೆನಿಗಳಿಗೆ ಈ ನಿರ್ದೇಶ ಹೊರಡಿಸಿದ್ದರು. 

2017ರ ಖಾರಿಫ್ ಋತುವಿಗೆ ಸಂಬಂಧಿಸಿದ ರೈತರ ಕ್ಲೇಮುಗಳನ್ನು ವಿಮಾ ಕಂಪೆನಿಗಳು ಅತ್ಯಂತ ನಿಧಾನ ಗತಿಯಲ್ಲಿ ಇತ್ಯರ್ಥಪಡಿಸುತ್ತಿರುವುದಕ್ಕೆ ಸಿಎಂ ಫ‌ಡ್ನವೀಸ್‌ ಅತೃಪ್ತಿ ವ್ಯಕ್ತಪಡಿಸಿದರು. ಕೃಷಿ ಸಚಿವ ಸದ್ಭಾವು ಖೋಟ್‌ ಅವರು ಸಭೆಯಲ್ಲಿ  ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next