Advertisement

ಆನೆ ಹಾವಳಿ : ಸಚಿವರ ವಿರುದ್ಧವೇ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಆಕ್ರೋಶ

01:14 PM Mar 17, 2022 | Team Udayavani |

ವಿಧಾನಸಭೆ : ತಮ್ಮದೇ ಪಕ್ಷದ ಸಚಿವರ ಬಗ್ಗೆ ಅಸಮಾಧಾನಗೊಂಡಿದ್ದ  ಬಿಜೆಪಿ ಸದಸ್ಯ  ಅಪ್ಪಚ್ಚು ರಂಜನ್ ಕಲಾಪದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಮ್ಮ ಪ್ರಶ್ನೆಗೆ ಉತ್ತರ ನೀಡಲು ಹದಿನೈದು ದಿನ ಸಮಯಾವಕಾಶ ಕೇಳಿದ ಕಾರಣಕ್ಕೆ ಅಪ್ಪಚ್ಚು ರಂಜನ್ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ವಿರುದ್ಧ  ಬೇಸರ ವ್ಯಕ್ತಪಡಿಸಿದರು.ಅಪ್ಪಚ್ಚು ರಂಜನ್ ಪ್ರಶ್ನೆಗೆ ಉತ್ತರ ನೀಡಲು ಕತ್ತಿವಹದಿನೈದು ದಿನ‌ ಸಮಯ ಕೇಳಿದ್ದಾರೆ.

ಕೊಡಗಿನಲ್ಲಿ ಆನೆ ಹಾವಳಿ ಹೆಚ್ಚಾಗಿದೆ.ಸರ್ಕಾರಕ್ಕೆ ನಿಯಂತ್ರಣ ಮಾಡುವುದಕ್ಕೆ ಆಗುವುದಿಲ್ಲವೇ ? ನಿಮ್ಮಿಂದ ಸಾಧ್ಯವಿಲ್ಲ ಎಂದಾದರೆ  ಹೇಳಿ.ನಾವೇ ನೋಡ್ಕೊತೀವಿ ಎಂದು ಸವಾಲು ಹಾಕಿದರು.

ಸಚಿವರು ಉತ್ತರ ನೀಡುವುದರಿಂದ  ತಪ್ಪಿಸಿಕೊಳ್ಳಲು ಈ ರೀತಿ ಸಮಯ ಕೇಳಿತ್ತಿದ್ದಾರೆ ಎಂದು ರಂಜನ್ ಆರೋಪಿಸಿದರು. ವಿಧಾನ ಪರಿಷತ್ತಿನಲ್ಲೂ ಸಚಿವರು ಉತ್ತ ನೀಡುವುದಕ್ಕೆ ಹದಿನೈದು, ಇಪ್ಪತ್ತು ದಿನಗಳ ಸಮಯ ಕೋರುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next