Advertisement

ಮಾಧವ ಕೃಪಾ ಮಣಿಪಾಲ, ಡೆಲ್ಲಿ ಪಬ್ಲಿಕ್‌ ಸ್ಕೂಲ್‌ ಮಂಗಳೂರು ಪ್ರಥಮ

06:05 AM Jul 31, 2017 | Harsha Rao |

ವಿಟ್ಲ : ದ.ಕ. ಹಾಗೂ ಉಡುಪಿ ಜಿಲ್ಲಾ ಮಟ್ಟದ ಸಿ.ಬಿ.ಎಸ್‌.ಇ. ಮತ್ತು ಐ.ಸಿ.ಎಸ್‌.ಇ. ಹಿರಿಯ ವಿದ್ಯಾರ್ಥಿಗಳ ಅಂತರ್‌ ಜಿಲ್ಲಾ ಮಟ್ಟದ ಟೇಬಲ್‌ ಟೆನ್ನಿಸ್‌ ಸ್ಪರ್ಧೆಯು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾ ಕೇಂದ್ರದಲ್ಲಿ  ಶನಿವಾರ ನಡೆಯಿತು.

Advertisement

23 ಶಾಲೆಗಳಿಂದ 125 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬಾಲಕರ ವಿಭಾಗದಲ್ಲಿ ಮಾಧವ ಕೃಪಾ ಮಣಿಪಾಲ ಪ್ರಥಮ ಹಾಗೂ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ ಮಂಗಳೂರು ದ್ವಿತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ ಮಂಗಳೂರು ಪ್ರಥಮ ಹಾಗೂ ಲಿಟ್ಲ  ರಾಕ್‌ ಇಂಡಿಯನ್‌ ಸ್ಕೂಲ್‌ ಬ್ರಹ್ಮಾವರ ದ್ವಿತೀಯ ಸ್ಥಾನ ಪಡೆದರು.

ಸಮಾರೋಪ ಸಮಾರಂಭದಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ ಅಧ್ಯಕ್ಷ ಯು. ಗಂಗಾಧರ ಭಟ್‌ ಮತ್ತು ಸಂಚಾಲಕ ಕೆ.ಎಸ್‌ .ಕೃಷ್ಣ ಭಟ್‌  ಬಹುಮಾನ ವಿತರಿಸಿದರು. ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ಭಟ್‌ ಮಾತನಾಡಿದರು.

ವಿದ್ಯಾಕೇಂದ್ರದ ಪ್ರಾಂಶುಪಾಲ ಶಿವಕುಮಾರ ಎಂ. ಸ್ವಾಗತಿಸಿ, ಉಪಪ್ರಾಂಶುಪಾಲ ರಾಧಾಕೃಷ್ಣ ಹೊಳ್ಳ ವಂದಿಸಿದರು. ಅಧ್ಯಾಪಕ ಯಾದವ ಎನ್‌. ಹಾಗೂ ಶ್ರೀಧರ ಬಿ. ಕಾರ್ಯಕ್ರಮ ನಿರ್ವಹಿಸಿದರು. ದೆ„ಹಿಕ ಶಿಕ್ಷಣ ಶಿಕ್ಷಕ ಆನಂದ ನಾಯ್ಕ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next