Advertisement

ಮಡಹಳ್ಳಿ ಗುಡ್ಡ ಕುಸಿತ ಪ್ರಕರಣ: 10 ಗಂಟೆ ಕಾರ್ಯಾಚರಣೆ ನಂತರ ಓರ್ವನ ಶವ ಹೊರಕ್ಕೆ

04:33 PM Mar 05, 2022 | Team Udayavani |

ಗುಂಡ್ಲುಪೇಟೆ (ಚಾಮರಾಜನಗರ): ಮಡಹಳ್ಳಿ ಬಿಳಿಕಲ್ಲು ಕ್ವಾರಿಯ ಗುಡ್ಡ ಕುಸಿತದಲ್ಲಿ ಕಲ್ಲಿನಡಿ ಸಿಲುಕಿದ್ದ ಮೂರು ಮಂದಿಯಲ್ಲಿ ಅಜಿಮ್ ಉಲ್ಲಾ ಎಂಬ ಒಬ್ಬ ವ್ಯಕ್ತಿಯ ಶವವನ್ನು ಹೊರತೆಗೆದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ಮೂಲಕ ರವಾನೆ ಮಾಡಲಾಗಿದೆ.

Advertisement

ಎನ್‍ಡಿಆರ್ ಎಫ್, ಎಸ್‍ಡಿಆರ್‍ಎಸ್ ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿ ಸತತ 10 ಗಂಟೆಗಳ ಕಾಲ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಓರ್ವನ ಶವವನ್ನು ಹೊರತೆಗೆದಿದ್ದು, ಇನ್ನುಳಿದ ಫರಾಜ್, ಮಿರಾಜ್ ಎಂಬ ಇಬ್ಬರು ವ್ಯಕ್ತಿಯ ಮೃತ ದೇಹ ಪತ್ತೆ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಉತ್ತರ ಪ್ರದೇಶದಿಂದ ಮೃತರ ಆಗಮಿಸುತ್ತಿರುವ ಕುಟುಂಬಸ್ಥರು: ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿರುವ ಮೂವರು ಉತ್ತರ ಪ್ರದೇಶದವರು ಎಂದು ತಿಳಿದು ಬಂದಿದೆ. ಸುದ್ದಿ ಅರಿತ ಕುಟುಂಬಸ್ಥರು ನೆನ್ನೆಯೆ ಹೊರಟಿದ್ದಾರೆ ಎಂದು ಪಕ್ಕದ ಕ್ವಾರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೋರ್ವ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next