Advertisement

ಗೋರಖ್‌ಪುರ, ಪೂಲ್‌ಪುರದಲ್ಲಿ ಬಿಜೆಪಿ ವಿಜಯ ಖಚಿತ: ಡಿಸಿಎಂ

12:00 PM Feb 26, 2018 | Team Udayavani |

ಲಕ್ನೋ : ಮಾರ್ಚ್‌ 11ರಂದು ನಡೆಯುವ ಗೋರಖ್‌ಪುರ ಮತ್ತು ಫ‌ೂಲ್‌ಪುರ ಲೋಕಸಭಾ ಉಪಚುನಾವಣೆಯಲ್ಲಿ ಕಮಲ ಅರಳುವ ವಿಶ್ವಾಸವನ್ನು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ವ್ಯಕ್ತಪಡಿಸಿದ್ದಾರೆ. 

Advertisement

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಡಿಸಿಎಂ ಮೌರ್ಯ ಅವರು ರಾಜ್ಯ ವಿಧಾನಸಭೆಗೆ ಚುನಾಯಿತರಾದ ಕಾರಣ ಅವರು ಅನುಕ್ರಮವಾಗಿ ತಮ್ಮ ಗೋರಖ್‌ಪುರ ಮತ್ತು ಪೂಲ್‌ಪುರ ಸಂಸದೀಯ ಕ್ಷೇತ್ರಗಳಿಗೆ ರಾಜೀನಾಮೆ ಕೊಟ್ಟಿರುವುದರಿಂದ ಉಪ ಚುನಾವಣೆ ಅನಿವಾರ್ಯವಾಗಿದೆ. 

ಈ ಉಪಚುನಾವಣೆಗಳು ಘೋಷಣೆಯಾದಾಗ ವಿರೋಧ ಪಕ್ಷಗಳು ತಮ್ಮ ವಿಜಯ ಸಾಧ್ಯತೆಯ ವಿಷಯ ಬಿಟ್ಟು ಬಿಜೆಪಿ ವಿಜಯದ ಅಂತರ ಎಷ್ಟಿರಬಹುದೆಂಬ ಚರ್ಚೆಯಲ್ಲೇ ಮಗ್ನವಾಗಿವೆ; ಅಂತಿರುವಾಗ ಬಿಜೆಪಿ ವಿಜಯ ಖಚಿತ ಎನ್ನುವುದು ವಿಪಕ್ಷಗಳಿಗೂ ಖಾತರಿ ಇದೆ ಎಂದು ಡಿಸಿಎಂ ಮೌರ್ಯ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next