Advertisement

ಬಣ್ಣ ಕಳೆದುಕೊಂಡಿವೆ ಝೀಬ್ರಾ ಕ್ರಾಸ್‌, ಹಂಪ್ಸ್‌

09:22 PM Aug 28, 2021 | Team Udayavani |

ಮಹಾನಗರ: ವಾಹನಗಳ ವೇಗ ನಿಯಂತ್ರಣದ ಜತೆಗೆ ರಸ್ತೆ ಅಪಘಾತ ತಪ್ಪಿಸಲೆಂದು ಮಂಗಳೂರು ನಗರದ ವಿವಿಧ ಕಡೆಗಳಲ್ಲಿ ರೋಡ್‌ ಹಂಪ್ಸ್‌ ಅಳವಡಿಸಲಾಗಿದ್ದು, ಇದೀಗ ಬಹುತೇಕ ಕಡೆಗಳಲ್ಲಿ ರಸ್ತೆ ಹಂಪ್ಸ್‌ಗೆ ಬಳಿದ ಬಣ್ಣ ಮಾಸಿದೆ. ಇದರಿಂದಾಗಿ ವಾಹನ ಸವಾರರು ಅಪಘಾತಕ್ಕೆ ಒಳಗಾಗಲು ಪ್ರಮೇಯ ಎದುರಾಗಿದೆ.

Advertisement

ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ, ಕೊಟ್ಟಾರ, ಕಾಪಿಕಾಡ್‌ ಬಳಿ, ಬಲ್ಲಾಳ್‌ಬಾಗ್‌, ಉರ್ವಸ್ಟೋರ್‌ ಸಹಿತ ನಗರದ ವಿವಿಧ ಕಡೆಗಳಲ್ಲಿ ಅಳವಡಿಸಿದ ಹಂಪ್‌ಗ್ಳಲ್ಲಿ ಬಣ್ಣ ಇಲ್ಲ. ವಿವಿಧ ಕಡೆಗಳಲ್ಲಿ ರಸ್ತೆಯುಬ್ಬುಗಳಿಗೆ ಹಾಕಿದ ಬಿಳಿ ಬಣ್ಣಗಳು ಕಾಣದೆ ರಾತ್ರಿ ಹೊತ್ತಿನಲ್ಲಿ ಸಂಚರಿಸುವವರಿಗೆ ಅಪಾಯ ಉಂಟಾಗುವ ಸಂಭವವಿದೆ.

ವಿವಿಧ ಕಡೆಗಳಲ್ಲಿ ಅವೈಜ್ಞಾನಿಕ ಹಂಪ್ಸ್‌ ಕಾರಣದಿಂದಾಗಿ ಈ ಹಿಂದೆ ಅಪಘಾತಕ್ಕೆ ಕಾರಣವಾಗುತ್ತಿತ್ತು. ಇದೀಗ ಬಹುತೇಕ ಕಡೆಗಳಲ್ಲಿ ವೈಜ್ಞಾನಿಕ ರೀತಿಯ ಐಆರ್‌ಸಿ ಮಾದರಿಯ ಹಂಪ್ಸ್‌ಗಳನ್ನು ಅಳವಡಿಸಲಾಗಿದೆ. ಇನ್ನು, ರಬ್ಬರ್‌ ಹಂಪ್‌ಗ್ಳನ್ನು ತೆರವು ಮಾಡಲಾಗಿದ್ದು, ಕೆಲವೆಡೆ ಹೊಸ ಹಂಪ್ಸ್‌ ನಿರ್ಮಾಣವಾದರೆ ಇನ್ನೂ ಕೆಲವೆಡೆ ಹಂಪ್‌ಗ್ಳನ್ನು ನಿರ್ಮಿಸಬೇಕಷ್ಟೆ. ಈಗಾಗಲೇ ನಿರ್ಮಾಣ ಮಾಡಿದ ಕೆಲವೊಂದು ಹಂಪ್‌ಗ್ಳಿಗೆ ಬಣ್ಣ ಬಳಿಯುವ ಕೆಲಸ ಇನ್ನಷ್ಟೇ ನಡೆಯಬೇಕು.

ಇದನ್ನೂ ಓದಿ:ಸುಳ್ಳುಗಳನ್ನು ತಡೆಯಲು ನಾಗರಿಕರು ಕಟಿಬದ್ಧರಾಗಿ : ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌

ರಸ್ತೆ ದಾಟಲು ಸಂಕಷ್ಟ
ಪಾದಚಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ, ಅತೀ ಹೆಚ್ಚು ಜನ ಸೇರುವ ಕಡೆಗಳಲ್ಲಿ ಝೀಬ್ರಾ ಕ್ರಾಸ್‌ ಅನ್ನು ಅಳವಡಿಸಲಾಗಿದೆ. ಆದರೆ ಬಹುತೇಕ ಕಡೆ ಝೀಬ್ರಾ ಕ್ರಾಸ್‌ಗಳ ಬಣ್ಣ ಮಾಸಿದೆ. ಸಿಗ್ನಲ್‌ಗ‌ಳಲ್ಲಿ ವಾಹನಗಳು ನಿಲ್ಲಿಸಲು ಸೂಚನೆ ಸಿಗದಂತಾಗಿದೆ. ಇನ್ನು, ಸಾರ್ವಜನಿಕರು ಕೂಡ ರಸ್ತೆ ದಾಟಲು ಕಷ್ಟಪಡುವಂತಾಗಿದೆ.

Advertisement

ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಉಂಟಾಗ ಬಾರದು ಎಂಬ ಉದ್ದೇಶಕ್ಕೆ ಕೆಲವೊಂದು ಜಂಕ್ಷನ್‌ಗಳಲ್ಲಿ ಪ್ರತ್ಯೇಕ ಬಸ್‌ ಲೇನ್‌ ವ್ಯವಸ್ಥೆ ಮಾಡಲಾ ಗಿದೆ. ಈ ರೀತಿಯ ಬಸ್‌ ಲೇನ್‌ಗಳಿಗೆ ಈ ಹಿಂದೆ ಕೋನ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ಸದ್ಯ ಅವು ಗಳೆಲ್ಲ ಹೋಗಿದ್ದು, ಬಳಿಕ ಪ್ರತ್ಯೇಕವಾಗಿ ಮಾರ್ಕಿಂಗ್‌ ಮಾಡಲಾ ಗಿತ್ತು. ಅವುಗಳು ಕೂಡ ಈಗ ಮಾಸಿದೆ. ಇನ್ನೂ ಕೆಲವೆಡೆ ಮಾರ್ಕಿಂಗ್‌ ವ್ಯವಸ್ಥೆಯೂ ಸಮರ್ಪಕವಾಗಿ ಇಲ್ಲ ಎನ್ನುತ್ತಾರೆ ವಾಹನ ಸವಾರರು.

ಮಾರ್ಗಸೂಚಿಗಳಲ್ಲಿ ಅಕ್ಷರ ಮಾಯ
ನಗರಕ್ಕೆ ಆಗಮಿಸಿದ ಮಂದಿಗೆ ವಿವಿಧ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳ ರಸ್ತೆಯ ಮಾಹಿತಿಗಾಗಿ ನಗರದಲ್ಲಿ ಅಳವಡಿಸಿದ ಮಾರ್ಗಸೂಚಿ ಫಲಕಗಳಲ್ಲಿ ಕೆಲವು ಕಡೆ ಅಕ್ಷರಗಳೇ ಕಾಣಿಸುತ್ತಿಲ್ಲ. ಕರಾವಳಿಯ ವಾತಾವರಣ, ಬಿಸಿಲಿನ ಬೇಗೆಗೆ ಅಕ್ಷರಗಳು ಮಾಸಿ ಹೋಗಿವೆ. ಇನ್ನು, ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಲ್ಲಿ ಮಹತ್ವ ತಿಳಿಸುವ ಬೋರ್ಡ್‌ ಗಳಿವೆ. ಆದರೆ ಕೆಲವೆಡೆ ಆ ಬೋರ್ಡ್‌ನಲ್ಲಿರುವ ಅಕ್ಷರಗಳು ಕಾಣಿಸುತ್ತಿಲ್ಲ.

ಅಗತ್ಯ ಕ್ರಮ
ಮಂಗಳೂರು ನಗರದ ಬಹು ತೇಕ ಕಡೆ ವೈಜ್ಞಾನಿಕ ಹಂಪ್‌ಗ್ಳನ್ನು ಅಳ ವಡಿಸಲಾ ಗಿದೆ. ಹೊಸದಾಗಿ ಅಳವಡಿ ಸಿರುವ ಹಂಪ್‌ಗ್ಳಿಗೆ ಕೆಲವೇ ದಿನಗಳಲ್ಲಿ ಬಣ್ಣ ಬಳಿಯುತ್ತೇವೆ. ಇನ್ನು, ಈಗಾಗಲೇ ಹಂಪ್‌ಗ್ಳಲ್ಲಿ ಬಣ್ಣ ಮಾಸಿದ್ದರೆ ಅವು ಗಳಿಗೂ ಬಣ್ಣ ಬಳಿಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತೇನೆ.
-ಪ್ರೇಮಾನಂದ ಶೆಟ್ಟಿ,
ಮನಪಾ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next