Advertisement

ರಾಯಚೂರು: ಅನಗತ್ಯ ಓಡಾಟ ಮಾಡಿದವರಿಗೆ ಲಾಠಿ ರುಚಿ, ವಾಹನಗಳ ಜಪ್ತಿ

11:17 AM May 10, 2021 | Team Udayavani |

ರಾಯಚೂರು: ಕಟ್ಟುನಿಟ್ಟಿನ ಜನತಾ ಕರ್ಫ್ಯೂ ಜಾರಿಯಾಗುತ್ತಿದ್ದಂತೆ ಬೆಳಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು.

Advertisement

ನೇತಾಜಿ ನಗರ ಪೋಲಿಸ್ ಠಾಣೆಯ ಪಿಎಸ್ ಐ ಬಸವರಾಜ್ ನೇತೃತ್ವದಲ್ಲಿ ನಗರದ ಪಟೇಲ್ ರಸ್ತೆಯಲ್ಲಿ ಓಡಾಡುತ್ತಿದ್ದ 40ಕ್ಕೂ ಹೆಚ್ಚು ಬೈಕ್ ಜಪ್ತಿ ಮಾಡಲಾಯಿತು. ಅದರ ಜತೆಗೆ 8 ಕಾರುಗಳನ್ನು ವಶಕ್ಕೆ ಪಡೆಯಲಾಯಿತು.

ಇದನ್ನೂ ಓದಿ:ನಾವು ಹೇಳಿದ್ದು ಜನಹಿತದ ಲಾಕ್ ಡೌನ್, ಆದರೆ ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ: ಎಚ್ ಡಿಕೆ

ವಾಹನಗಳ ಮಾಲೀಕರಿಗೆ ದಂಡ ವಿಧಿಸಲಾಯಿತು. ಈ ವೇಳೆ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಹರಿಬಾಬು ಲಾಠಿ ಹಿಡಿದು ಬಿಸಿ ಮುಟ್ಟಿಸಿದರು. ಬೆಳಿಗ್ಗೆಯಿಂದ ಫ್ರೀಯಾಗಿ ಓಡಾಡುತ್ತಿದ್ದ ಜನರಿಗೆ, 10 ಗಂಟೆಯ ನಂತರ ಪೊಲೀಸರು ಫುಲ್ ಚಾರ್ಜ್ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next