Advertisement

ತರಕಾರಿ ಮಾರುತ್ತಿರುವ ‘ಬಾಲಿಕಾ ವಧು’ನಿರ್ದೇಶಕ!

02:30 AM Sep 29, 2020 | Hari Prasad |

ಹೊಸದಿಲ್ಲಿ: ಖ್ಯಾತ ಹಿಂದಿ ಟಿವಿ ಧಾರಾವಾಹಿ ಬಾಲಿಕಾ ವಧು ನಿರ್ದೇಶಕ ರಾಮ ವೃಕ್ಷ ಗೌರ್‌, ಉತ್ತರ ಪ್ರದೇಶದ ಅಜಂಗಡದಲ್ಲಿ ಜೀವನೋಪಾಯಕ್ಕಾಗಿ ಈಗ ತರಕಾರಿ ಮಾರುತ್ತಿದ್ದಾರೆ!

Advertisement

ಕೋವಿಡ್ 19 ಲಾಕ್‌ಡೌನ್‌ಗೂ ಮುಂಚೆ ಭೋಜ್‌ಪುರಿ ಚಿತ್ರವೊಂದರ ಶೂಟಿಂಗ್‌ಗಾಗಿ ಸೂಕ್ತ ಲೊಕೇಷನ್‌ ಹುಡುಕಲು ಅಜಂಗಡಕ್ಕೆ ಆಗಮಿಸಿದ್ದರು.

ಆ ಸಂದರ್ಭದಲ್ಲಿ ಗೌರ್ ಅವರಿ ಲಾಕ್‌ಡೌನ್‌ ಸುಳಿಗೆ ಸಿಲುಕಿದರು. ಆ ಚಿತ್ರವೂ ಅಲ್ಲಿಗೇ ನಿಂತಿತು.

ಕೈಯ್ಯಲ್ಲಿದ್ದ ದುಡ್ಡು ಖಾಲಿಯಾಗುತ್ತಿರುವುದನ್ನು ಗಮನಿಸಿದ ಅವರು ತಮ್ಮ ಕುಟುಂಬ ಹಿಂದೆ ನಡೆಸುತ್ತಿದ್ದ ತರಕಾರಿ ಮಾರಾಟವನ್ನೇ ಸದ್ಯದ ಕಸುಬಾಗಿಸಿಕೊಂಡರು.

ಈಗಲೂ ಅದು ಮುಂದುವರಿದಿದೆ. ಮುಂಬಯಿಯಲ್ಲಿ ತಾವು ಸ್ವಂತ ಮನೆ ಹೊಂದಿದ್ದು, ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ಮೇಲೆ ಪುನಃ ಮುಂಬಯಿಗೆ ತೆರಳುವುದಾಗಿ ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next