Advertisement

Wayanad ಸಂತ್ರಸ್ತರ ಸಾಲ ಮನ್ನಾ: ಬ್ಯಾಂಕ್‌ಗಳಿಗೆ ಸಿಎಂ

01:33 AM Aug 20, 2024 | Team Udayavani |

ವಯನಾಡ್‌: ವಯನಾಡ್‌ ಭೂಕುಸಿತ ಸಂತ್ರಸ್ತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಕೇರಳ ಸಿಎಂ ಪಿಣ ರಾಯಿ ವಿಜಯನ್‌ ಬ್ಯಾಂಕ್‌ಗಳನ್ನು ಆಗ್ರಹಿಸಿದ್ದಾರೆ. ಅಲ್ಲದೇ ಸಂತ್ರಸ್ತರ ಖಾತೆಯಿಂದ ಬ್ಯಾಂಕ್‌ಗಳು ಇಎಂಐ ಕಡಿತಗೊಳಿಸಿರುವ ಬಗ್ಗೆಯೂ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

Advertisement

ಗ್ರಾಮೀಣ ಬ್ಯಾಂಕ್‌ ಒಂದು ಸಂತ್ರಸ್ತ ರಿಗೆ ಸರಕಾರ ನೀಡಿದ ಪರಿಹಾರದ ಹಣದಲ್ಲೇ ಇಎಂಐ ಕಡಿತಗೊಳಿಸಿರುವ ಘಟನೆ ವರದಿಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸಾಲ ಪಡೆದವರಲ್ಲಿ ಬಹುತೇಕರು ಮೃತಪಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ಬ್ಯಾಂಕ್‌ಗಳು ಸಾಲ ವಸೂಲಾತಿ ಮಾಡುವುದು ಸರಿ ಅಲ್ಲ. ಅವುಗಳನ್ನು ಮನ್ನಾ ಮಾಡುವುದರಿಂದ ಬ್ಯಾಂಕ್‌ಗೆ ಹೆಚ್ಚಿನ ಹೊರೆಯಾಗದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next