Advertisement

ಪೊಲೀಸ್‌ ಸರ್ಪಗಾವಲಲ್ಲಿ ಜನಜೀವನ

05:08 PM Apr 09, 2020 | Suhan S |

ಮಳವಳ್ಳಿ: ಪಟ್ಟಣದಲ್ಲಿ ಕೋವಿಡ್ 19 ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಮೂರು ಕಿಲೋ ಮೀಟರ್‌ ವ್ಯಾಪ್ತಿ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು, ಬಿಗಿ ಭದ್ರತೆಯಲ್ಲಿ ಜನಜೀವನ ಸಾಗಿದೆ.

Advertisement

ತಾಲೂಕಿನಲ್ಲಿ ಒಟ್ಟು 4 ಮಂದಿಗೆ ಕೋವಿಡ್ 19  ಸೋಂಕು ದೃಢಪಟ್ಟಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪಟ್ಟಣದ ಮೂರು ಕಿ.ಮೀ. ವ್ಯಾಪ್ತಿಯನ್ನು “ನಿಯಂತ್ರಿತ ವಲಯ’ವಾಗಿ ಘೋಷಿಸಿದೆ. ಹೀಗಾಗಿ ಹೆಚ್ಚಿನ ಬಿಗಿ ಭದ್ರತೆ ಕಲ್ಪಿಸಿದ್ದು, ಯಾವುದೇ ವ್ಯಕ್ತಿಯೂ ಅನಗತ್ಯವಾಗಿ ಓಡಾಟ ನಡೆಸುವಂತಿಲ್ಲ. ಆದರೂ ಕೆಲವರು ರಸ್ತೆಗಿಳಿದಿದ್ದರಿಂದ ಅನಿರ್ವಾಯವಾಗಿ ಡಿವೈಎಸ್‌ಪಿ ಎಂ.ಜೆ.ಪೃಥ್ವಿ ಹಾಗೂ ಸಿಪಿಐ ರಮೇಶ್‌ ಜಂಟಿ ಕಾರ್ಯಾಚರಣೆ ನಡೆಸಿ ಲಾಠಿ ರುಚಿ ತೋರಿಸಬೇಕಾಯಿತು.

6 ಝೋನ್‌: ಅಗತ್ಯ ಸೇವೆಗಳನ್ನು ಜನರ ಮನೆ ಬಳಿಗೆ ತಲುಪಿಸಲು ಪುರಸಭೆ ಪಟ್ಟಣವನ್ನು 6 ಝೊàನ್‌ಗಳಾಗಿ ವಿಂಗಡಿಸಿ 38 ಅಂಗಡಿಗಳ ಮೂಲಕ ದಿನಸಿ ಸಾಮಗ್ರಿ ದೂರವಾಣಿ ಕರೆ ಮೂಲಕ ಸಾರ್ವಜನಿಕರು ಪಡೆದುಕೊಳ್ಳಬಹುದು. ತರಕಾರಿ ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಲು 11 ಮಂದಿಗೆ ಅನುಮತಿ ನೀಡಲಾಗಿದೆ. ಪಟ್ಟಣದ ಜನರು ಮನೆಯಿಂದ ಹೊರ ಬರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಚೆಕ್‌ ಪೋಸ್ಟ್‌ಗಳು ಬಿಗಿ:ಪಟ್ಟಣದ ಈದ್ಗಾ ಮೊಹಲ್ಲಾ ಪ್ರದೇಶದ ಸುತ್ತಮುತ್ತಲಿನ 3 ಕಿ.ಮೀ.ವ್ಯಾಪ್ತಿಯನ್ನು ಪಟ್ಟಣದ ಪೊಲೀಸರು ಬ್ಯಾರಿಕೇಟ್‌ಗಳನ್ನು ಅಳವಡಿಸಿ ಯಾವುದೇ ವಾಹನ ಮತ್ತು ವ್ಯಕ್ತಿಯು ಓಡಾಟ ನಡೆಸದಂತೆ ಭದ್ರತೆ ಕಲ್ಪಿಸಿದೆ. ಚೆಕ್‌ಪೋಸ್ಟ್‌ ಗಳಲ್ಲಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಿದ್ದು, ಅನು ಮತಿ ಪಡೆದಂತಹವವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next