Advertisement

ಕೊಟ್ಟಿಗೆಯಂತಾಗಿದೆ ಗ್ರಂಥಾಲಯ

11:59 AM May 06, 2022 | Team Udayavani |

ಶಹಾಬಾದ: ತಾಲೂಕಿನ ಭಂಕೂರ ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಗ್ರಾಪಂ ಸದಸ್ಯ ಲಕ್ಷ್ಮೀಕಾಂತ ಕಂದಗೂಳ ಭೇಟಿ ನೀಡಿದಾಗ ಅಲ್ಲಿನ ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡರು.

Advertisement

ಗ್ರಂಥಾಲಯದ ಟೇಬಲ್‌ ಮೇಲೆ, ಜ್ಞಾನಪೀಠ ಪ್ರಶಸ್ತಿ ವಿಜೇತರ ಭಾವಚಿತ್ರದ ಎದುರೇ ಸೆಗಣಿ ಹರಡಲಾಗಿತ್ತು. ಈ ಅವ್ಯವಸ್ಥೆ ಕಂಡು ಅಲ್ಲಿನ ಸಿಬ್ಬಂದಿ ವಿರುದ್ಧ ಕಂದಗೂಳ ಆಕ್ರೋಶ ವ್ಯಕ್ತಪಡಿಸಿದರು.

ಗ್ರಂಥಾಲಯ ಸಿಬ್ಬಂದಿ ಪಾರ್ವತಿ ಮಠಪತಿ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎನ್ನುವ ಕಾರಣಕ್ಕೆ ಬಯೋಮೆಟ್ರಿಕ್‌ ಯಂತ್ರ ಕೂಡಿಸಲಾಗಿತ್ತು. ಅದನ್ನು ಕೂಡಾ ಹಾಳು ಮಾಡಿದ್ದರಿಂದ ಈಗ ಮತ್ತೊಂದು ಯಂತ್ರ ಕೂಡಿಸಲಾಗಿದೆ. ಆದರೂ ಸರಿಯಾದ ಸಮಯಕ್ಕೆ ಅವರು ಬಾಗಿಲು ತೆರೆಯುತ್ತಿಲ್ಲ. ಆದ್ದರಿಂದ ಗ್ರಂಥಾಲಯ ಸ್ವಚ್ಛತೆ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ತಾಪಂ ಇಒ ಬಸಲಿಂಗಪ್ಪ ಡಿಗ್ಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಕಂದಗೂಳ ತಿಳಿಸಿದರು.

ಗ್ರಂಥಾಲಯದಲ್ಲಿನ ಸ್ವತ್ಛತೆ ಕುರಿತು ಮಾಹಿತಿ ಬಂದಿದ್ದು, ಅಲ್ಲಿನ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗುವುದು. ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬಸಲಿಂಗಪ್ಪ ಡಿಗ್ಗಿ, ಇಒ, ತಾಪಂ

Advertisement

Udayavani is now on Telegram. Click here to join our channel and stay updated with the latest news.

Next