Advertisement

ವಾಕಥಾನ್‌ನಿಂದ ಉತ್ಸಾಹ ಆರಂಭಗೊಳ್ಳಲಿ: ನಿರಂಜನ್‌ ಭಟ್‌

06:15 AM Oct 02, 2018 | |

ಉಡುಪಿ: ಹಿರಿಯ ನಾಗರಿಕರು ಮಾನಸಿಕವಾಗಿ ಯಾವಾಗಲೂ ಸದೃಢರೇ ಆಗಿರುತ್ತಾರೆ. ಆದರೆ ದೈಹಿಕವಾಗಿ ಸದೃಢರಾಗಲು ನಿಯಮಿತ ವ್ಯಾಯಾಮ ಅಗತ್ಯ, ಈ ವಾಕಥಾನ್‌ ಮೂಲಕ ನಿರಂತರ ವ್ಯಾಯಾಮಕ್ಕೆ ಚಾಲನೆ ದೊರಕಲಿ ಎಂದು ಜಿಲ್ಲಾ ವಿಕಲಚೇತನ ಮತ್ತು ಹಿರಿಯನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ನಿರಂಜನ್‌ ಭಟ್‌ ಹೇಳಿದರು. 

Advertisement

ಅವರು, ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯದ ಆಕ್ಯೂಪೇಶನಲ್‌ ಥೆರಪಿ ವಿಭಾಗ, ಹಿರಿಯನಾಗರಿಕರ ವೇದಿಕೆ, ಲಯನ್ಸ್‌ಕ್ಲಬ್‌ ಸಂಯುಕ್ತ ಆಶ್ರಯದಲ್ಲಿ ನಡೆದ ವಾಕಥಾನ್‌ ಅನ್ನು ಸಿಳ್ಳೆ ಊದುವ ಮೂಲಕ ಉದ್ಘಾಟಿಸಿ ಮಾತನಾಡಿ,  ಹಿರಿಯನಾಗರಿಕರು ವಯಸ್ಸಾಯಿತು ಎಂದು ಮನೆಯಲ್ಲಿ ಕುಳಿತುಕೊಳ್ಳದೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳಬೇಕು. ಆಗ ಮಾತ್ರ ಲವಲವಿಕೆಯಿಂದ ಇರಲು ಸಾಧ್ಯ ಎಂದರು. 

ಲಯನ್ಸ್‌ ಜಿಲ್ಲಾ ಗವರ್ನರ್‌ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ವಾಕಿಂಗ್‌ ಜತೆ ಸ್ನೇಹಿತರೊಂದಿಗೆ ಕಷ್ಟ ಸುಖ 
ಮಾತನಾಡಿ ಇದರಿಂದ ಮನಸ್ಸಿನ ಭಾರ ಇಳಿಯುತ್ತದೆ, ಮನಸ್ಸು ಆಹ್ಲಾದಗೊಳ್ಳುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ನಾಗರಿಕ ವೇದಿಕೆಯ ಗೌರವಾಧ್ಯಕ್ಷ ಎ.ಪಿ ಕೊಡಂಚ, ನಾವು ಹಿರಿಯ ನಾಗರಿಕರೆಂದು ಸುಮ್ಮನೆ ಕುಳಿತು ಕೊಳ್ಳುವುದು ತಪ್ಪು. ನಾವು ನಮ್ಮ ಕೆಲಸವನ್ನು ಮಾಡಿಕೊಂಡು ನಮ್ಮ ಪಾಡಿಗೆ ಇದ್ದರೆ ಬೇರೆಯವರಿಗೆ ಹೊರೆಯಾಗುವುದಿಲ್ಲ. ನಾವು ಕೂಡ ಆರೋಗ್ಯವಂತರಾಗಿರುತ್ತೇವೆ ಎಂದರು.

ಮಣಿಪಾಲದ ಅಸೋಸಿಯೇಟ್‌ ಡೀನ್‌ ಡಾ| ಕೆ.ಎಂ ಸಾಬು ಉಪಸ್ಥಿತರಿದ್ದರು. ವೇದಿಕೆ ಅಧ್ಯಕ್ಷ ಸಿ. ಎಸ್‌ ರಾವ್‌ ಸ್ವಾಗತಿಸಿ, ಆಕ್ಯುಪೇಶನಲ್‌ ತೆರಪಿ ವಿಭಾಗದ ವಿಭಾಗ ಮುಖ್ಯಸ್ಥೆ ಡಾ| ಸೆಬಾಸ್ಟಿನ್‌ ಅನಿತಾ ಡಿ’ಸೋಜಾ ಪ್ರಸ್ತಾವನೆಗೈದರು. ಭುವನೇಂದ್ರ ರಾವ್‌ ನಿರೂಪಿಸಿ, ದೇವರಾಜ್‌ ರಾವ್‌ ವಂದಿಸಿದರು. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next