Advertisement

ಜಾತ್ಯತೀತ ಶಕ್ತಿಗಳು ಒಟ್ಟಾಗಲಿ: ಎಚ್ಡಿಡಿ

10:53 PM Jan 10, 2020 | Lakshmi GovindaRaj |

ಬೆಂಗಳೂರು: “ದೇಶದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡಲು ಜಾತ್ಯತೀತ ಶಕ್ತಿಗಳು ಒಂದಾಗಬೇಕಿದೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಜಾತ್ಯತೀತ ಶಕ್ತಿ ಗಳನ್ನು ಒಗ್ಗೂಡಿಸಲು ನಾನೇ ಎಲ್ಲರ ಮನೆಗೆ ಹೋಗುತ್ತೇನೆ. ನನಗೆ ಯಾವುದೇ ಹಿಂಜರಿಕೆ ಇಲ್ಲ.

Advertisement

ಅಧಿಕಾರಕ್ಕಾಗಿ ನಾವು ತಪ್ಪು ಮಾಡುತ್ತೇವೆ. ಆದರೆ, ಇಂದಿನ ಪರಿಸ್ಥಿತಿ ನೋಡಿದರೆ ಜಾತ್ಯತೀತ ಶಕ್ತಿಗಳು ಒಟ್ಟಾದರೆ ಮಾತ್ರ ಬಿಜೆಪಿ ವಿರುದ್ಧ ಹೋರಾಟ ಮಾಡಲು ಸಾಧ್ಯ. ಇದು ನನ್ನ ಕೊನೆಯ ಪ್ರಯತ್ನ ಹಾಗೆಯೇ ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಹೋಗೋಣ. ಇದು ಅನಿವಾರ್ಯ, ಅಗತ್ಯವೂ ಹೌದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next