Advertisement

Belthangahdy: ತಿಮ್ಮಣಬೆಟ್ಟು ಪರಿಸರದಲ್ಲಿ ಚಿರತೆ ಹಾವಳಿ

08:03 PM Aug 31, 2023 | Team Udayavani |

ಬೆಳ್ತಂಗಡಿ: ವೇಣೂರು ಗ್ರಾ.ಪಂ. ವ್ಯಾಪ್ತಿಯ ಕರಿಮಣೇಲು ಗ್ರಾಮದ ಜನ ಚಿರತೆ ಹಾವಳಿಗೆ ಜನ ಬೆದರಿದ್ದಾರೆ.

Advertisement

ಕರಿಮಣೇಲುವಿನ ತಿಮ್ಮಣಬೆಟ್ಟು ಪರಿಸರದ ಭಾಸ್ಕರ ಕೋಟ್ಯಾನ್‌ ಅವರ ದನದ ಕರುವಿನ ಮೇಲೆ ದಾಳಿ ಮಾಡಿದೆ. ತಿಮ್ಮಣಬೆಟ್ಟು ಶಾಲೆ ಹತ್ತಿರದ ನಿವಾಸಿಯಾಗಿರುವ ಹರೀಶ್‌ ನಾಯಕ್‌ ಅವರ ತೋಟದಲ್ಲಿ ಹಾಡಹಗಲೇ ಚಿರತೆ ಹಾಗೂ ಚಿರತೆ ಮರಿಗಳು ಕಂಡು ಬಂದಿದ್ದು, ಪ್ರಾಥಮಿಕ ಶಾಲೆ, ಅಂಗಡಿಕೇಂದ್ರ ಸನಿಹದಲ್ಲೇ ಇರುವುದರಿಂದ ಇಲ್ಲಿನ ಜನ ಭಯಬೀತರಾಗಿದ್ದಾರೆ.
ತುರ್ತು ಸ್ಪಂದಿಸಿದ ವೇಣೂರು ಅರಣ್ಯ ಇಲಾಖೆ ಗ್ರಾಮಸ್ಥರ ಮನವಿಗೆ ವೇಣೂರು ಅರಣ್ಯ ಇಲಾಖೆ ತುರ್ತಾಗಿ ಕ್ರಮಕೈಗೊಂಡಿದೆ. ತಿಮ್ಮಣಬೆಟ್ಟು ಪರಿಸರದಲ್ಲಿ ಚಿರತೆ ಹಿಡಿಯಲು ಬೋನ್‌ ಅಳವಡಿಸಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಭಯ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next