Advertisement

ತಾಲೂಕಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ

01:39 PM Aug 15, 2020 | Suhan S |

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಕಳೆದೊಂದು ತಿಂಗಳಲ್ಲಿ ಮೂರ್‍ನಾಲ್ಕು ಕೊಲೆ ಗಳು ನಡೆದಿರುವುದು ಗಮನಿಸಿದರೆ ತಾಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆ ವೈಫ‌ಲ್ಯ ಎದ್ದು ಕಾಣುತ್ತಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ತಾಪಂ ಅಧ್ಯಕ್ಷ ಶ್ಯಾಮಲಾ ಆರೋಪಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿ, ಡಾಬಾಗಳ ಬಳಿ ಎರಡು ಕೊಲೆ ನಡೆದಿರುವುದಲ್ಲದೆ ಓರ್ವ ನಿಷ್ಠಾವಂತ ಪೊಲೀಸ್‌ ಅಧಿಕಾರಿ ನೇಣಿಗೆ ಶರಣಾಗಿರುವುದರ ಹಿಂದಿನ ಮರ್ಮ ಸಾರ್ವಜನಿ ಕರಿಗೆ ತಿಳಿದಿದೆ, ಈ ಬಗ್ಗೆ ತನಿಖೆ ನಡೆಸಿ ಸಾರ್ವಜನಿಕರಿಗೆ ತಳಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದರು.

ಕೆಲ ಪುಡಿ ರೌಡಿಗಳು ಬಾರ್‌, ಕ್ಲಬ್‌, ಚಿನ್ನಬೆಳ್ಳಿ ಅಂಗಡಿ ಹಾಗೂ ಬಟ್ಟೆ ಅಂಗಡಿ ಸೇರಿದಂತೆ ವಿವಿಧ ಉದ್ಯಮಿ, ವರ್ತಕ ರಿಂದ ಮಾಮೂಲಿ ವಸೂಲಿ ಮಾಡುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ, ಈ ಬಗ್ಗೆ ನಿಗಾ ವಹಿಸಬೇಕಾಗಿರುವ ಪೊಲೀಸ್‌ ಇಲಾಖೆ ಕಣ್ಣು ಮುಚ್ಚಿ ಕುಳಿತಿರಲು ಕಾರಣವೇನು? ಇನ್ನು ತಾಲೂಕು ಆಡಳಿತ ಯಾವ ಮಟ್ಟಿಗೆ ಜನರಿಗೆ ಸೇವೆ ನೀಡುತ್ತಿದೆ ಎನ್ನುವುದು ತಿಳಿಯುತ್ತಿದೆ ಎಂದರು.

ಉಪಾಧ್ಯಕ್ಷ ರಾಮಕೃಷ್ಣೇಗೌಡ ಮಾತನಾಡಿ, ಕಳೆದ ಏಳೆಂಟು ತಿಂಗಳಲ್ಲಿ ನಡೆದಿರುವ ಹತ್ತಾರು ಹತ್ಯಾ ಪ್ರಕರಣಗಳು ಸೇರಿದಂತೆ ದಕ್ಷ ಪೊಲೀಸ್‌ ಅಧಿಕಾರಿ ಕಿರಣ್‌ ಕುಮಾರ್‌ ಆತ್ಮಹತ್ಯೆ ಗಮನಿಸಿದರೆ ತಾಲೂಕು ರಕ್ತಸಿಕ್ತವಾಗಿ ಪರಿಣಮಿ ಸುತ್ತಿರುವ ಲಕ್ಷಣ ಕಂಡುಬರುತ್ತಿದೆ, ಮಹಿಳೆಯರು ಹಾಗೂ ಯುವತಿಯರು ರಸ್ತೆಯಲ್ಲಿ ಒಂಟಿಯಾಗಿ ಸಂಚಾರ ಮಾಡುವುದು ಕಷ್ಟವಾಗುತ್ತಿದೆ, ಒಂದು ರೀತಿಯಲ್ಲಿ ಉತ್ತರ ಭಾರತದ ವಾತಾ ವರಣ ತಾಲೂಕಿನಲ್ಲಿ ಸೃಷ್ಟಿಯಾಗುತ್ತಿದೆ ಎಂದರು. ತಾಪಂ ಸದಸ್ಯರಾದ ಗಿರೀಶ್‌, ಇಂದಿರಾ, ರಂಜಿತಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next